Advertisement

ಅಂಬರ್‌ನಾಥ್‌ ನೂತನ ನಗರಾಧ್ಯಕ್ಷೆ ಮನಿಷಾಗೆ ಗೌರವ 

02:33 PM Jan 17, 2018 | Team Udayavani |

ಅಂಬರ್‌ನಾಥ್‌: ಅಂಬರ್‌ನಾಥ್‌ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಅಂಬರ್‌ನಾಥ್‌ ನಗರ ಪಾಲಿಕೆಯ ನೂತನ ಅಧ್ಯಕ್ಷೆಯಾಗಿ ಆಯ್ಕೆಗೊಂಡ ಮನಿಷಾ ವಾಳೇಕರ್‌ ಅವರನ್ನು ಇತ್ತೀಚೆಗೆ ಅಭಿನಂದಿಸಿ ಗೌರವಿಸಲಾಯಿತು.

Advertisement

ಅಂಬರ್‌ನಾಥ್‌ ನಗರ ಸಭಾ ಕಾರ್ಯಲತದಲ್ಲಿ ಸ್ಥಳೀಯ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಅಧ್ಯಕ್ಷ ಆರ್‌. ಬಿ. ಹೆಬ್ಬಳ್ಳಿ ಅವರು ಮನಿಷಾ ವಾಳೇಕರ್‌ ಅವರನ್ನು ಶಾಲು ಹೊದೆಸಿ, ಫಲಪುಷ್ಪವನ್ನಿತ್ತು ಸಮ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಆರ್‌. ಬಿ. ಹೆಬ್ಬಳ್ಳಿ ಅವರು  ನಮ್ಮ ಸಮಾಜದ ಓರ್ವ ಮಹಿಳೆ ನಗರಾಧ್ಯಕ್ಷೆ ಆಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಅವರಿಂದ ಇನ್ನಷ್ಟು ಅಭಿವೃದ್ಧಿಪರ ಕಾರ್ಯಕ್ರಮಗಳು ನಡೆದು ಪ್ರಸಿದ್ಧಿಯನ್ನು ಪಡೆಯಲಿ ಎಂದು ಶುಭಹಾರೈಸಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಮನಿಷಾ ವಾಳೇಕರ್‌ ಅವರು, ನನ್ನ ಸಮಾಜದವರು ನೀಡಿದ ಈ ಸಮ್ಮಾನ ತವರೂರಿನ ಸಮ್ಮಾನ ಸ್ವೀಕರಿಸಿದಂತೆ ಅನುಭವವಾಯಿತು. ಇದನ್ನು ಕೃತಜ್ಞಾಪೂರ್ವಕವಾಗಿ ಸ್ವೀಕರಿಸುತ್ತೇನೆ. ಸಮಾಜದ ಏಳ್ಗೆಗಾಗಿ, ಕನ್ನಡಿಗರ ಅಭಿವೃದ್ದಿಗಾಗಿ ನನ್ನ ಪ್ರೋತ್ಸಾಹ, ಸಹಕಾರ ಸದಾಯಿರಲಿದೆ. ನೀವು ನನ್ನ ಮೇಲಿಟ್ಟಿರುವ ಅಭಿಮಾನಕ್ಕೆ ಋಣಿಯಾಗಿದ್ದೇನೆ ಎಂದು ನುಡಿದು ಎಲ್ಲರಿಗೂ ವಂದಿಸಿದರು. ಸಮಾಜದ ಗಣ್ಯರುಗಳಾದ ಶಂಕರ ಸ್ವಾಮಿ, ಪ್ರಕಾಶ್‌ ಗುಳವೆ, ಮೋಹನ್‌ ಸ್ವಾಮಿ, ಅಶೋಕ್‌ ಪರೊಸಾಂದೆ ಮೊದಲಾದವರು ಉಪಸ್ಥಿತರಿದ್ದು ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next