Advertisement

ಅಂಬಲಪಾಡಿ ಮಜ್ಜಿಗೆ ಪಾದೆ 10 ಎಕ್ರೆ ವಿಸ್ತೀರ್ಣದಲ್ಲಿ ಗದ್ದೆಗೆ ಬೆಂಕಿ

08:15 PM Jun 09, 2019 | sudhir |

ಮಲ್ಪೆ: ಅಂಬಲಪಾಡಿಯ ಕಿದಿಯೂರು ಮಜ್ಜಿಗೆಪಾದೆ ಬಳಿ ರವಿವಾರ ಸಂಜೆ ವಿದ್ಯುತ್‌ ಶಾರ್ಟ್‌ ಸರ್ಕ್ನೂಟ್‌ನಿಂದಾಗಿ ಗದ್ದೆಗೆ ಬೆಂಕಿ ತಗಲಿ ಸುತ್ತಲೂ ಹರಡಿಕೊಂಡಿದ್ದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.

Advertisement

ಸುಮಾರು 10 ಎಕ್ರೆಗಳಷ್ಟು ವಿಸೀ¤ರ್ಣದಲ್ಲಿ ಬೆಂಕಿ ಹರಡಿದ್ದು, ಈ ವೇಳೆ ವೇಗವಾಗಿ ಗಾಳಿ ಬೀಸುತ್ತಿದ್ದುದರಿಂದ ಹೊಗೆ ಎದ್ದು ಕೆಲವು ಕಿ. ಮೀ. ದೂರದವರೆಗೂ ಅವರಿಸಿದೆ. ಸ್ಥಳೀಯರು ಸೇರಿದಂತೆ ಅಗ್ನಿಶಾಮಕ ದಳದವರು ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಮಜ್ಜಿಗೆಪಾದೆ , ಕಿದಿಯೂರು ಉದಯ ಕುಮಾರ್‌ ಶೆಟ್ಟಿ ಅವರ ಮನೆ ಸಮೀಪದ ಗದ್ದೆಯಲ್ಲಿ ಹೆಚ್ಚು ಬೆಂಕಿ ಕಾಣಿಸಿಕೊಂಡಿದೆ. ಸಮೀಪದ ತೆಂಗಿನ ಮರಗಳಿಗೆ ಹೊರತುಪಡಿಸಿ ಇನ್ನಾವುದೇ ದೊಡ್ಡ ಹಾನಿಯಾಗಿಲ್ಲ.

ಜನ ಪ್ರತಿನಿಧಿಗಳಾದ ಉದಯ ಕುಮಾರ್‌ ಶೆಟ್ಟಿ, ರಾಜೇಂದ್ರ ಪಂದುಬೆಟ್ಟು ,
ವೆಂಕಟರಮಣ ಕಿದಿಯೂರು ಸೇರಿದಂತೆ ಅಂಬಲಪಾಡಿ ಗ್ರಾ.ಪಂ. ಸದಸ್ಯರು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next