Advertisement

ಇರಿಯಣ್ಣಿಯಲ್ಲಿ ವಿಸ್ಮಯ: ಜಿಂಕೆ ಕೂಗಿನ ಬೆನ್ನಲ್ಲೇ ಅಪ್ಪಳಿಸಿದ ಉಲ್ಕೆ

10:02 PM Mar 07, 2023 | Team Udayavani |

ಕಾಸರಗೋಡು: ಇರಿಯಣ್ಣಿ ಬಲತ್ತ್ಕಯದಲ್ಲಿ ಮಾ.6 ರಂದು ರಾತ್ರಿ ವಿಸ್ಮಯ ಘಟನೆಯೊಂದು ನಡೆದಿದೆ. ರಾತ್ರಿ ಸುಮಾರು 10.50 ಕ್ಕೆ ಇಲ್ಲೇ ಸಮೀಪದ ಕಾಡಿನಲ್ಲಿ ಜಿಂಕೆಯೊಂದು ಸ್ವಾಭಾವಿಕವಲ್ಲದ ರೀತಿಯಲ್ಲಿ ಚೀರಾಡುತ್ತಿತ್ತು. ಇದನ್ನು ಗಮನಿಸಿದ ಡಾ|ಸಂತೋಷ್‌ ಕುಮಾರ್‌ ಈ ಶಬ್ದವನ್ನು ದಾಖಲಿಸುತ್ತಿದ್ದರು. ಇವರು ದೆಹಲಿಯಲ್ಲಿ ವಿಜ್ಞಾನಿಯಾಗಿದ್ದಾರೆ. ಇವರ ಮನೆ ಕಾಡಿನ ಸಮೀಪದಲ್ಲೇ ಇದ್ದು, ಸಂತೋಷ್‌ ಕುಮಾರ್‌ ರಜೆಯಲ್ಲಿ ಮನೆಯಲ್ಲಿದ್ದರು. ಅಸಾಮಾನ್ಯ ರೀತಿಯ ಜಿಂಕೆಯ ಕೂಗನ್ನು ಇವರು ದಾಖಲಿಸುತ್ತಿದ್ದಂತೆ ಮೇಲಿನಿಂದ ಉಲ್ಕೆ ಒಂದು ಕೆಳಗೆ ಅಪ್ಪಳಿಸುವುದು ಕಂಡು ಬಂತು. ಅದು ಮರಗಳನ್ನು ಸ್ಪರ್ಶಿಸುವ ಮುನ್ನವೇ ಸ್ಫೋಟಗೊಂಡಿದ್ದು, ಇದಕ್ಕೆಲ್ಲಾ ಈ ವಿಜ್ಞಾನಿ ಸಾಕ್ಷಿಯಾಗಿದ್ದಾರೆ. ಒಂದು ವೇಳೆ ಉಲ್ಕೆ ಕಾಡಿಗೆ ಬಿದ್ದು ಸ್ಫೋಟಗೊಂಡಿದ್ದರೆ ಬೆಂಕಿ ಹತ್ತಿಕೊಳ್ಳುತ್ತಿತ್ತು ಎಂದು ಅಭಿಪ್ರಾಯಪಡಲಾಗಿದೆ. ಇದೇ ವೇಳೆ ಉಲ್ಕೆ ಬೀಳುವುದನ್ನು ಜಿಂಕೆ ಮುಂಚಿತವಾಗಿ ತಿಳಿದು ಚೀರಾಡಿರಬೇಕೆಂದು ಶಂಕಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next