Advertisement

ಮಹಾಲಿಂಗಪುರ: ಅಮರನಾಥ ಯಾತ್ರಿಕರಿಗೆ ತಾಯ್ನಾಡಿನಲ್ಲಿ ಭವ್ಯ ಸ್ವಾಗತ

07:55 PM Jul 15, 2023 | Team Udayavani |

ಮಹಾಲಿಂಗಪುರ : ಇದೇ ಜುಲೈ 3 ರಂದುಮಹಾಲಿಂಗಪುರ ದಿಂದ ಇದೇ ಪ್ರಥಮ ಬಾರಿಗೆ ಅಮರನಾಥ ಯಾತ್ರೆಗೆ ತೆರಳಿದ್ದ ಪಟ್ಟಣದ 6 ಜನ ಯಾತ್ರಿಕರು ಯಶಸ್ವಿಯಾಗಿ ಯಾತ್ರೆಯನ್ನು ಮುಗಿಸಿಕೊಂಡು ಸುರಕ್ಷಿತವಾಗಿ ಮರಳಿದ್ದಾರೆ.

Advertisement

ಶನಿವಾರ ಮಹಾಲಿಂಗಪುರಕ್ಕೆ ಬಂದ ಯಾತ್ರಿಕರನ್ನು ಅವರ ಗೆಳೆಯರ ಬಳಗದವರು ಬಸ್ ನಿಲ್ದಾಣದಲ್ಲಿ ಹೂಮಾಲೆ ಹಾಕಿ , ಸಿಹಿತಿನ್ನಿಸಿ ಭವ್ಯವಾಗಿ ಸ್ವಾಗತ ಕೋರಿದರು. ‌ಮಹಾಲಿಂಗಪುರದ ಮಲ್ಲಪ್ಪ ಭಾವಿಕಟ್ಟಿ, ಬಸವರಾಜ ಬಂಡಿವಡ್ಡರ, ಸಂಜು ಜಮಖಂಡಿ, ಶಂಕರ ಪಾತ್ರೋಟ, ಬೆಳಗಾವಿ ಹತ್ತಿರದ ಸುಳೆಭಾಂವಿಯ ಮಹಾಲಿಂಗ ನೀಲನ್ನವರ, ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಯೋಧ ಮಹಾದೇವಪ್ಪ ತಳ್ಳಿ ಸೇರಿದಂತೆ ಒಟ್ಟು 6 ಜನರು ಜುಲೈ 3 ರಂದು ಸಂಜೆ ಕುಡಚಿಯಿಂದ ರೈಲ್ವೆ ಮೂಲಕ ಮುಂಬೈಗೆ ತೆರಳಿ, ಜುಲೈ 5 ರಂದು ಮುಂಬೈಯಿಂದ ಜಮ್ಮು ಕಾಶ್ಮೀರದ ಶ್ರೀನಗರವರೆಗೆ ವಿಮಾನ ಮೂಲಕ ಅಮರನಾಥ ಯಾತ್ರೆಗೆ ತೆರಳಿದ್ದರು.

ಭಾರಿ ಮಳೆ ಮತ್ತು ಅಮರನಾಥ ಯಾತ್ರೆಯ ಮಾರ್ಗ ಮಧ್ಯೆ ಭೂಕುಸಿತ ಹಿನ್ನೆಲೆಯಲ್ಲಿ ಮೂರು ದಿನ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು. ಅಮರನಾಥ ಯಾತ್ರೆಯ ಮಧ್ಯದಲ್ಲಿರುವ ಡೊಮಾಲ್ ದ ವಿಶಾಲ ಭಂಡಾರ ಶಿವ ಆಶ್ರಯದಲ್ಲಿ 3 ದಿನ ವಾಸ್ತವ್ಯ ಇದ್ದರು. ಜುಲೈ 10 ರಂದು ಅಮರನಾಥ ದರ್ಶನ ಪಡೆದು ಜುಲೈ 11 ರಂದು ಸಂಜೆ ಶ್ರೀನಗರ ವಿಮಾನ ನಿಲ್ದಾಣಕ್ಕೆ ಮರಳಿ ಬಂದಿದ್ದರು. ‌ ಮಳೆ ಮತ್ತು ಭೂಕುಸಿತ ಹಿನ್ನೆಲೆಯಲ್ಲಿ ಸಾವಿರಾರು ಪ್ರಯಾಣಿಕರು ದರ್ಶನ ಇಲ್ಲದೇ, ಇನ್ನು ಸಾವಿರಾರು ಜನರು ದರ್ಶನ ಪಡೆದು ಏಕಕಾಲಕ್ಕೆ ಶ್ರೀನಗರಕ್ಕೆ ವಾಪಸ ಆದ ಕಾರಣ ಸಕಾಲದಲ್ಲಿ ವಿಮಾನ ಟಿಕೆಟ್ ಸಿಗದೇ ಜುಲೈ 11 ರಿಂದ 14 ರ ಮಧ್ಯಾಹ್ನದವರೆಗೂ ಶ್ರೀನಗರದಲ್ಲಿದ್ದು, 14 ರಂದು ಮಧ್ಯಾಹ್ನ ಶ್ರೀನಗರದಿಂದ ವಿಮಾನ ಮೂಲಕ ಮುಂಬೈಗೆ ಬಂದು, ಮುಂಬೈನಿಂದ ಬಸ್ ಮೂಲಕ ಮಹಾಲಿಂಗಪುರಕ್ಕೆ ಬಂದೆವು.

ಭಗವಂತನ ಕೃಪೆಯಿಂದ ಯಾವುದೇ ತೊಂದರೆ ಇಲ್ಲದೇ ಅಮರನಾಥ ಯಾತ್ರೆ ಮುಗಿಸಿ ತಾಯ್ನಾಡಿಗೆ ಬಂದಿದ್ದೇವೆ ಎಂದು ಯಾತ್ರೀಕರು ತಮ್ಮ ಯಾತ್ರಾ ಅನುಭವ ಹಂಚಿಕೊಂಡರು. ಮಹಾದೇವ ಹುಣಶ್ಯಾಳ, ಅಶೋಕ ಬಾಣಕಾರ, ಸುನೀಲ ಜಮಖಂಡಿ, ಶ್ರೀಶೈಲ ಕಿರಗಟಗಿ, ವಿನೋದ ಚಮಕೇರಿ, ಪ್ರಕಾಶ ಬಾಡನವರ, ಚಂದು ಕಾಗಿ, ಬಸವರಾಜ ಹುಲ್ಯಾಳ, ಮಹಾಲಿಂಗ ಹಾವನಳ್ಳಿ ಸೇರಿದಂತೆ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next