Advertisement

ಮೈತ್ರಿಗೆ ನಾವೂ ಸಿದ್ಧ: ಅಮರಿಂದರ್‌ ಸ್ನೇಹ ಪ್ರಸ್ತಾವನೆಗೆ ಸೈ ಎಂದ “ಕಮಲ’

08:07 PM Oct 20, 2021 | Team Udayavani |

ಚಂಡೀಗಢ : ಕಾಂಗ್ರೆಸ್‌ನಿಂದ ಹೊರಬಿದ್ದಿರುವ ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌, ಮಂಗಳವಾರ ಬಿಜೆಪಿಯೊಂದಿಗೆ ಚುನಾವಣೆ ಹೊಂದಾಣಿಕೆ ಮಾಡಿಕೊಳ್ಳಲು ಸಿದ್ಧ ಎಂದಿದ್ದರು. ಇದಕ್ಕೆ ಬುಧವಾರ ಪ್ರತಿಕ್ರಿಯಿಸಿರುವ ಬಿಜೆಪಿ, ನಾವೂ ಕೂಡಾ ಸಿದ್ಧವಿದ್ದೇವೆ ಎಂದು ಹೇಳಿದೆ. ಅಲ್ಲಿಗೆ ಪಂಜಾಬ್‌ನಲ್ಲಿ ವಿಚಿತ್ರ ರಾಜಕೀಯ ಲೆಕ್ಕಾಚಾರವೊಂದಕ್ಕೆ ವೇದಿಕೆ ಸೃಷ್ಟಿಯಾಗಿದೆ.

Advertisement

ಮಂಗಳವಾರ ಟ್ವೀಟ್‌ ಮಾಡಿದ್ದ ಅಮರೀಂದರ್‌, ನಾನು ಹೊಸಪಕ್ಷ ಸ್ಥಾಪಿಸುತ್ತೇನೆ. ರೈತ ಕಾಯ್ದೆಗಳ ವಿವಾದ ಬಗೆಹರಿದರೆ ಬಿಜೆಪಿಯೊಂದಿಗೆ ಚುನಾವಣೆ ಮೈತ್ರಿ ಮಾಡಿಕೊಳ್ಳಲು ಸಿದ್ಧ ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಪಂಜಾಬ್‌ನ ಬಿಜೆಪಿ ಉಸ್ತುವಾರಿ ದುಷ್ಯಂತ್‌ ಗೌತಮ್‌; ನಾವು ಅಮರೀಂದರ್‌ ಜೊತೆಗೆ ಮೈತ್ರಿಗೆ ಸಿದ್ಧ. ರಾಷ್ಟ್ರೀಯ ದೃಷ್ಟಿಕೋನ ಹೊಂದಿರುವ, ರಾಷ್ಟ್ರೀಯ ಭದ್ರತೆಗೆ ಬಗ್ಗೆ ಕಾಳಜಿ ಹೊಂದಿರುವ ಯಾವುದೇ ಪಕ್ಷದೊಂದಿಗೆ ನಾವು ಮೈತ್ರಿ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ.

ಒಂದು ಕಾಲದಲ್ಲಿ ಅಮರೀಂದರ್‌ ಸಿಂಗ್‌, ಬಿಜೆಪಿಗೆ ಪ್ರಬಲ ಎದುರಾಳಿಯಾಗಿದ್ದರು. ಶಿರೋಮಣಿ ಅಕಾಲಿದಳ ಮಿತ್ರಸ್ಥಾನದಲ್ಲಿತ್ತು. ಈಗ ಅಕಾಲಿದಳ-ಬಿಜೆಪಿ ಬೇರೆಯಾಗಿವೆ. ಅಮರೀಂದರ್‌ ಬಿಜೆಪಿಯೊಂದಿಗೆ ಕೈಜೋಡಿಸಿದ್ದಾರೆ!

ಇದನ್ನೂ ಓದಿ :ಕ್ಯಾಶ್‌ಲೆಸ್‌ ವ್ಯವಹಾರದತ್ತ ಕೊಂಕಣ ರೈಲ್ವೇ : ಎಸ್ ಬಿಐನೊಂದಿಗೆ ಕೊಂಕಣ ರೈಲ್ವೇ ಒಪ್ಪಂದ

Advertisement

Udayavani is now on Telegram. Click here to join our channel and stay updated with the latest news.

Next