Advertisement

ಅಮರನಾಥ ಯಾತ್ರೆಯಲ್ಲಿ ಸಿಲುಕಿದ ಬೆಳಗಾವಿ ಮಹಿಳೆ : ಮೊಬೈಲ್ ಸ್ವಿಚ್ ಆಫ್

10:45 AM Jul 10, 2022 | Team Udayavani |

ಬೆಳಗಾವಿ : ಜಮ್ಮು ಕಾಶ್ಮೀರದ ಪವಿತ್ರ ಯಾತ್ರಾಸ್ಥಳ ಅಮರನಾಥ ದರ್ಶನಕ್ಕೆ ಬೆಳಗಾವಿಯ ಮಹಿಳೆಯೋರ್ವರು ತೆರಳಿದ್ದು, ಸದ್ಯ ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ.

Advertisement

ಬೆಳಗಾವಿ ಸಮೀಪದ ದೇವರಾಜ ಅರಸ ಕಾಲೋನಿಯ ನಿವಾಸಿಯೋರ್ವವರು  5ರಂದು ಅಮರನಾಥ ಯಾತ್ರೆಗೆ ತೆರಳಿದ್ದಾರೆ. ಮೇಘ ಸ್ಪೋಟ ಹಿನ್ನೆಲೆಯಲ್ಲಿ ಅವರನ್ನು ಸಂಪರ್ಕಿಸಲು ಜಿಲ್ಲಾಡಳಿತ ಪ್ರಯತ್ನಿಸುತ್ತಿದೆ. ಬೆಂಗಳೂರಿನ ಮಹಿಳೆಯೋರ್ವರು ಇದ್ದಾರೆ ಎಂದು ತಿಳಿದುಬಂದಿದೆ.

ದೇವರಾಜ ಅರಸ್ ಕಾಲೋನಿಯಲ್ಲಿರುವ ಅವರ ಪತಿ ಉದಯವಾಣಿಯೊಂದಿಗೆ ಮಾತನಾಡಿ, ಜು. 5ರಂದು ಬೆಳಗಾವಿಯಿಂದ ತೆರಳಿದ್ದು, ಅಮರನಾಥ ದೇವರ ದರ್ಶನ ಪಡೆದುಕೊಂಡಿದ್ದಾರೆ. ಒಂದು ದಿನಗಳ ಹಿಂದೆಯಷ್ಟೇ  ಅವರೊಂದಿಗೆ ಮಾತನಾಡಿದ್ದೇವೆ, ಸುರಕ್ಷಿತವಾಗಿದ್ದಾರೆ. ಹವಾಮಾನ ಸರಿ ಇಲ್ಲದ್ದಕ್ಕೆ ಸಂಪರ್ಕಕ್ಕೆ ಸಿಗುತ್ತಿಲ್ಲ. ರಾತ್ರಿವರೆಗೆ ಮೊಬೈಲ್ ಆನ್ ಆಗುವ ಸಾಧ್ಯತೆ ಇದೆ ಎಂದು ಹೇಳಿದರು.

ಜಿಲ್ಲಾಡಳಿತದ ಅಧಿಕಾರಿಗಳು ಮಹಿಳೆಯೊಂದಿಗೆ ಸಂಪರ್ಕ ಸಾಧಿಸುತ್ತಿದೆ. ಜಮ್ಮು ಕಾಶ್ಮೀರದ ಅಮರನಾಥ ದೇವಸ್ಥಾನ ಬಳಿ ಇರುವ ನೋಡಲ್ ಅಧಿಕಾರಿಗಳನ್ನು ಸಂಪರ್ಕದಲ್ಲಿದೆ.

ಇದನ್ನೂ ಓದಿ : ಶ್ರೀಲಂಕಾ ಬಿಕ್ಕಟ್ಟು:ಅಧ್ಯಕ್ಷ ಗೊಟಬಯಾ ಪರಾರಿ ಬೆನ್ನಲ್ಲೇ ಪ್ರಧಾನಿ ರಾನಿಲ್ ರಾಜೀನಾಮೆ ಇಂಗಿತ

Advertisement
Advertisement

Udayavani is now on Telegram. Click here to join our channel and stay updated with the latest news.

Next