Advertisement

ಅಳವಾರ್‌ನಲ್ಲಿ ಚಚ್ಚಿ ಕೊಂದ ಪ್ರಕರಣ: ಕಠಿನ ಶಿಕ್ಷೆಯ ಭರವಸೆ

05:09 PM Jul 21, 2018 | udayavani editorial |

ಜೈಪುರ : ರಾಜಸ್ಥಾನದ ಅಳವಾರ್‌ ಜಿಲ್ಲೆಯಲ್ಲಿ ಗೋವುಗಳ ಕಳ್ಳನೆಂದು ಶಂಕಿಸಿ 28ರ ಹರೆಯದ ವ್ಯಕ್ತಿಯನ್ನು ನಿನ್ನೆ ಶುಕ್ರವಾರ ರಾತ್ರಿ ಉದ್ರಿಕ್ತ ಗುಂಪೊಂದು ಹೊಡೆದು ಚಚ್ಚಿ ಸಾಯಿಸಿದ ಪ್ರಕರಣದ ಅಪರಾಧಿಗಳ ವಿರುದ್ದ ಕಠಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ರಾಜಸ್ಥಾನ ಗೃಹ ಸಚಿವ ಗುಲಾಬ್‌ ಚಂದ್‌ ಕಟಾರಿಯಾ ಹೇಳಿದ್ದಾರೆ.

Advertisement

ಜಾತಿ, ಧರ್ಮದ ಗಡಿಯನ್ನು ದಾಟಿ ನಾವು ಈ ಪ್ರಕರಣದ ಅಪರಾಧಿಗಳನ್ನು ಹಿಡಿದು ಅವರಿಗೆ ಕಾನೂನು ಪ್ರಕಾರ ಕಠಿನ ಶಿಕ್ಷೆಯಾಗುವಂತೆ ನೋಡಿಕೊಳ್ಳುತ್ತೇವೆ ಎಂದು ಕಟಾರಿಯಾ ಇಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

ಗೋ ಕಳ್ಳನೆಂದು ಶಂಕಿಸಿ ಚಚ್ಚಿ ಸಾಯಿಸಲ್ಪಟ್ಟಿರುವ ವ್ಯಕ್ತಿಯ ಮೃತದೇಸವನ್ನು ಅಳವಾರ್‌ ಶವಾಗಾರದಲ್ಲಿ ಇರಿಸಲಾಗಿದ್ದು ಬಳಿಕ ಅದನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅಟಾಪ್ಸಿ ವರದಿಯನ್ನು ಕಾಯಲಾಗುತ್ತಿದೆ.  

Advertisement

Udayavani is now on Telegram. Click here to join our channel and stay updated with the latest news.

Next