Advertisement

ಕಟ್ಟಡವಿದ್ದರೂ ರಸ್ತೆ ಬದಿಯಲ್ಲೇ ವ್ಯಾಪಾರ; ಸಾರ್ವಜನಿಕರಿಗದೇ ಚಿಂತೆ

05:24 PM Sep 14, 2023 | Team Udayavani |

ಗುತ್ತಿಗಾರು: ಇಲ್ಲಿ ಸುಸಜ್ಜಿತ ಕಟ್ಟಡ ವಿದ್ದರೂ ರಸ್ತೆ ಬದಿಯಲ್ಲೇ ಮಾರಾಟಗಾರರು ಸಂತೆ ನಡೆಸು ತ್ತಿದ್ದು, ಇದರಿಂದಾಗಿ ರಸ್ತೆಯಲ್ಲಿ ಸಾರ್ವ ಜನಿಕರು ಹಾಗೂ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿರುವ ದೂರು ಕೇಳಿಬಂದಿದೆ.

Advertisement

ವಾರದ ಸಂತೆ ಪ್ರತೀ ಶನಿವಾರ ಇಲ್ಲಿನ ಮುತ್ತಪ್ಪ ನಗರದಲ್ಲಿ ಹಲವು ವರ್ಷಗಳಿಂದ ನಡೆಯುತ್ತಿದೆ. ಊರ ಮತ್ತು ಪರವೂರಿನ
ಹಲವು ಮಂದಿ ಇಲ್ಲಿ ಬಂದು ತರಕಾರಿ ಹಾಗೂ ದಿನಸಿ ವಸ್ತುಗಳನ್ನು ಖರೀದಿಸುತ್ತಾರೆ. ಈ ಹಿನ್ನೆಲೆಯಲ್ಲಿ ಗುತ್ತಿಗಾರು ಪಂಚಾಯತ್‌ ವಿವಿಧ ಅನುದಾನಗಳ ಮೂಲಕ ಸಂತೆ ಮಾರುಕಟ್ಟೆಗೆಂದೇ ಉತ್ತಮವಾದ ಕಟ್ಟಡ ನಿರ್ಮಿಸಿಕೊಟ್ಟಿದೆ. ಆದರೆ ಈ ಪ್ರಾಂಗಣದಲ್ಲಿ ಕೆಲವೇ ವ್ಯಾಪಾರಿಗಳು ವಹಿವಾಟಿನಲ್ಲಿ ತೊಡಗಿದ್ದು, ಉಳಿದವರು ಹೆದ್ದಾರಿಯ ಬದಿಯಲ್ಲೇ ವ್ಯಾಪಾರ ನಡೆಸುತ್ತಿದ್ದಾರೆ.

ವಾಹನ ಓಡಾಟಕ್ಕೆ ಸಂಕಷ್ಟ

ಜಾಲ್ಸೂರು – ಸುಬ್ರಹ್ಮಣ್ಯ ರಾ.ಹೆ.ಯ ಇಕ್ಕೆಡೆಗಳಲ್ಲೆ ಕೆಲವು ವ್ಯಾಪಾರಿಗಳು ವ್ಯಾಪಾರದಲ್ಲಿ ತೊಡಗಿರುವ ಕಾರಣ, ವಾಹನಗಳ ಸುಗಮ ಸಂಚಾರಕ್ಕೆ ಧಕ್ಕೆಯಾಗುತ್ತಿದೆ. ರಸ್ತೆ ಬದಿಯಲ್ಲೇ ಜನರು ಹಾಗೂ ಸಂತೆ ಸಾಮಗ್ರಿಗಳು ತುಂಬಿಕೊಂಡಿರುವ ಕಾರಣ ವಾಹನ ಸವಾರರಿಗೂ ಗೊಂದಲ ಉಂಟಾಗುತ್ತಿದೆ.

ಶಾಲಾ ಮಕ್ಕಳಿಗೆ ತೊಂದರೆ

Advertisement

ಸಂತೆ ನಡೆಯುವ ಪ್ರದೇಶದಲ್ಲೇ ಗುತ್ತಿಗಾರು ಸ.ಪ.ಪೂ ಕಾಲೇಜಿಗೆ ತೆರಳುವ ರಸ್ತೆ ಇದೆ. ಶನಿವಾರ ಮಧ್ಯಾಹ್ನ ಮಕ್ಕಳು ಮನೆಗೆ ತೆರಳುವ ವೇಳೆ ರಸ್ತೆಯಲ್ಲಿ ಓಡಿ ಬರುವುದು ಮತ್ತು ರಸ್ತೆ ತುಂಬೆಲ್ಲಾ ವಾಹನಗಳ ಓಡಾಟ ಹಾಗೂ ವಾಹನ ನಿಲುಗಡೆಯೂ ಅಲ್ಲಿಯೇ ಮಾಡುವುದರಿಂದ ಅಪಾಯ ಸಂಭವಿಸುವ ಸಾಧ್ಯತೆಯೂ ಹೆಚ್ಚಿದೆ ಎಂಬುದು ಸ್ಥಳೀಯರ ಅಭಿಪ್ರಾಯ.

ಸಂತೆ ದಿನದಂದು ವ್ಯಾಪಾರಿಗಳಿಂದ ಗುತ್ತಿಗಾರು ಪಂಚಾಯತ್‌ ಸುಂಕ ಸಂಗ್ರಹಿಸುತ್ತಿದೆ. ಆದರೆ ತಾನೇ ನಿರ್ಮಿಸಿದ ಕಟ್ಟಡದಲ್ಲಿ
ವ್ಯಾಪಾರ ವಹಿವಾಟು ನಡೆಸುವಂತೆ ಸೂಚಿಸುವ ಅಥವಾ ಮೇಲ್ವಿಚಾರಣೆ ನಡೆಸುವ  ಗೋಜಿಗೆ ಪಂಚಾಯತ್‌ ಹೋಗುವುದಿಲ್ಲ.
ಹಾಗಾಗಿಯೇ ವ್ಯಾಪಾರಿಗಳು ರಸ್ತೆ ಬದಿ ಟೆಂಟ್‌ ಹಾಕಿ ವ್ಯಾಪಾರ ಮಾಡುತ್ತಿದ್ದಾರೆ ಎಂಬುದು ಸದ್ಯದ ದೂರು. ಅಗತ್ಯ ಕ್ರಮ ಕೈ
ಗೊಳ್ಳಬೇಕೆಂಬುದು ಸಾರ್ವಜನಿಕರ ಆಗ್ರಹ

ಪಾಳು ಬಿದ್ದ ಮೀನು ಮಾರಾಟ ಪ್ರಾಂಗಣ ಸಂತೆ ಮಾರುಕಟ್ಟೆ ಬಳಿಯಲ್ಲೇ ಹಸಿಮೀನು ಮಾರಾಟಕ್ಕೆ ಪ್ರಾಂಗಣ ನಿರ್ಮಿಸಲಾಗಿದ್ದು, ಈ ಕಟ್ಟಡಕ್ಕೆ ಭೇಟಿ ನೀಡುವವರೇ ಇಲ್ಲವಾಗಿದೆ. ಮೀನು ಮಾರಾಟಗಾರರೂ ರಸ್ತೆ ಬದಿಯಲ್ಲೇ ವ್ಯಾಪಾರ ನಡೆಸುವ ಕಾರಣ ಈ ಕಟ್ಟಡವೂ ನಿರ್ವಹಣೆ ಇಲ್ಲದೆ ಪಾಳು ಬಿದ್ದಿದೆ.

ಅನುದಾನ ಮಂಜೂರಾಗಿದೆ ಸಂತೆ ಮಾರುಕಟ್ಟೆ ಸಮಸ್ಯೆ ಅರಿವಿಗೆ ಬಂದಿದೆ. ಮೀನು ಮಾರುಕಟ್ಟೆಗೆ ಮೂಲ ಸೌಕರ್ಯ ಕಲ್ಪಿಸಲು ಅನುದಾನ ಮಂಜೂರಾಗಿದೆ. ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತದೆ.
-ಸುಮಿತ್ರಾ ಮೂಕಮಲೆ,
ಅಧ್ಯಕ್ಷರು, ಗ್ರಾ.ಪಂ. ಗುತ್ತಿಗಾರು

ಸೂಕ್ತ ನಿಯಮ ರೂಪಿಸಿ ಸಂತೆ ಮಾರುಕಟ್ಟೆ ಆವಶ್ಯಕವಾಗಿದ್ದು, ಜತೆಗೆ ಮಾರಾಟಕ್ಕೆ ಸೂಕ್ತ ನಿಯಮಗಳನ್ನು ರೂಪಿಸಬೇಕಿದೆ. ಅಹಿತಕರ ಘಟನೆ ಸಂಭವಿಸುವ ಮೊದಲು ಸ್ಥಳೀಯಾಡಳಿತ ಎಚ್ಚೆತ್ತುಕೊಳ್ಳಬೇಕು.
-ದಿನೇಶ್‌,ಗ್ರಾಮಸ್ಥರು

ಕೃಷ್ಣಪ್ರಸಾದ್‌ ಕೋಲ್ಚಾರ್‌

Advertisement

Udayavani is now on Telegram. Click here to join our channel and stay updated with the latest news.

Next