Advertisement

ಮೈತ್ರಿ ಸರ್ಕಾರ ನನ್ನ ಪಾಲಿಗೆ ವನವಾಸವಾಗಿತ್ತು, ಪಕ್ಷ ಉಳಿಸಲು ರಾಜೀನಾಮೆ:ಡಾ.ಕೆ.ಸುಧಾಕರ್

08:29 AM Oct 01, 2019 | Team Udayavani |

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಉಳಿಸಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದೆಯೆಂದು ಅನರ್ಹ ಶಾಸಕ ಡಾ.ಕೆ.ಸುಧಾಕರ್ ತಿಳಿಸಿದರು.

Advertisement

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಪ್ರಯುಕ್ತ ಸೋಮವಾರ ಮಂಚೇನಹಳ್ಳಿ ಕ್ಷೇತ್ರದಲ್ಲಿ ಚುನಾವಣೆ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಸ್ ಮೈತ್ರಿ ಕೂಟದ ಸರ್ಕಾರ ನನ್ನ ಪಾಲಿಗೆ 14 ತಿಂಗಳ ವಾನವಾಸ ಅಗಿತ್ತು. ಆದ್ದರಿಂದ ರಾಜೀನಾಮೆ ಕೊಟ್ಟ ಸರ್ಕಾರದಿಂದ ಹೊರ ಬಂದೆ. ಆದರೆ ನಾನೂ ಎಲ್ಲೂ ಕಾಂಗ್ರೆಸ್ ವಿರುದ್ದ ಮಾತನಾಡಿಲ್ಲ. ಪ್ರಾಮಾಣಿಕವಾಗಿ ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಉಳಿಸುವ ಕೆಲಸ ಮಾಡಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next