Advertisement

“ಕಾಂಗ್ರೆಸ್‌ನೊಂದಿಗಿನ ಮೈತ್ರಿ ಯಾದವರಿಗೆ ಮುಳುವಾಯ್ತು’

03:45 AM May 09, 2017 | Team Udayavani |

ಚಿತ್ರದುರ್ಗ: “ನಾನು ಪ್ರಧಾನಮಂತ್ರಿ ಹುದ್ದೆಯಿಂದ ಇಳಿದ ನಂತರ ಎಲ್ಲಾ ರಾಜ್ಯಗಳ ಪ್ರಾದೇಶಿಕ ಪಕ್ಷಗಳ ನಾಯಕರು ಒಮ್ಮತದಿಂದ ಮುಲಾಯಂಸಿಂಗ್‌ ಯಾದವ್‌ ಅವರನ್ನು ಪ್ರಧಾನಿ ಮಾಡಲು ಸಜ್ಜಾಗಿದ್ದೆವು. 

Advertisement

ಆದರೆ ಶ್ರೀರಾಮನಿಗೆ ಪಟ್ಟಾಭಿಷೇಕ ಮಾಡಲು ಹೊರಟಾಗ ಮಂಥರೆ, ಕೈಕೇಯಿಯ ಮನಸ್ಸು ಕೆಡಿಸಿದ ಹಾಗೆ ಐ.ಕೆ. ಗುಜ್ರಾಲ್‌ ಅವರನ್ನು ಪ್ರಧಾನಿಯನ್ನಾಗಿಸಲು ನಿರ್ಧಾರ ಕೈಗೊಳ್ಳಲಾಯಿತು. ಹಾಗಾಗಿ ಮುಲಾಯಂಸಿಂಗ್‌ ಅವರಿಗೆ ಪ್ರಧಾನಿ ಪಟ್ಟ ತಪ್ಪಿತ್ತು. ಗುಜ್ರಾಲ್‌ ಅವರನ್ನು ಪ್ರಧಾನಿಯನ್ನಾಗಿಸಿದ ನಿರ್ಧಾರವನ್ನು ನಾನು ವಿರೋಧಿಸಿದ್ದೆ’ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಹಿಂದಿನ ದಿನಗಳ ಮೆಲುಕು ಹಾಕಿದರು.

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಕೂಡ್ಲಹಳ್ಳಿ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಇತ್ತೀಚೆಗೆ ಉತ್ತರಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಂಡು ಅಖೀಲೇಶ್‌ ಯಾದವ್‌ ತಪ್ಪು ಮಾಡಿದ್ದಾರೆ. ಕಾಂಗ್ರೆಸ್‌ಗೆ 105 ಸ್ಥಾನ ನೀಡಿದರೂ ಕೇವಲ 7 ಸ್ಥಾನಗಳಲ್ಲಿ ಗೆದ್ದಿದೆ. ಒಂದು ರಾತ್ರಿಯಲ್ಲಿ ತೆಗೆದುಕೊಂಡ ದಿಢೀರ್‌ ನಿರ್ಧಾರ ಯಾದವರಿಗೆ ಮುಳುವಾಗಿದೆ. ಆತುರದ ನಿರ್ಧಾರ ಕೈಗೊಂಡಿದ್ದಕ್ಕೆ ಸರಿಯಾದ ಬೆಲೆ ತೆತ್ತರು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next