Advertisement

ಮೈತ್ರಿ ಸರ್ಕಾರದ ವಿರುದ್ಧ ಹೊರಟ್ಟಿ ಅಸಮಾಧಾನ

06:25 AM Sep 24, 2018 | Team Udayavani |

ಕೊಪ್ಪಳ: ಮೈತ್ರಿ ಸರ್ಕಾರ ರೈತರ ಆತ್ಮಹತ್ಯೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ತಮ್ಮ ವೈಯಕ್ತಿಕ ಕೆಲಸ ಬಿಟ್ಟು ರೈತರ ನೆರವಿಗೆ ಧಾವಿಸಬೇಕೆಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಸರ್ಕಾರದ ವಿರುದ್ಧ ಚಾಟಿ ಬೀಸಿದ್ದಾರೆ.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರು ಆತ್ಮಹತ್ಯೆ ಮಾಡಿಕೊಂಡರೆ ಕೆಲವು ಸಚಿವರು ತಮ್ಮದೇ ಧಾಟಿಯಲ್ಲಿ ಏನೇನೋ ಹೇಳಿಕೆ ನೀಡುತ್ತಿದ್ದಾರೆ. ವ್ಯತಿರಿಕ್ತ ಹೇಳಿಕೆ ನೀಡುತ್ತಿರುವುದು ನನಗೆ ಸಹಿಸಲಾಗುತ್ತಿಲ್ಲ. ಮಂಡ್ಯದ ರೈತ ಆತ್ಮಹತ್ಯೆ ಪ್ರಕರಣ ಕೇಳಿ ಕಣ್ಣಲ್ಲಿ ನೀರು ಬರುತ್ತಿವೆ. ರೈತರ ಸಾಲ ಮನ್ನಾ ಆದರೂ ಅ ಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ ಎಂದು ಅ ಧಿಕಾರಿಗಳ ವೈಖರಿಗೆ ಗರಂ ಆದರು.ರೈತರ ಆತ್ಮಹತ್ಯೆ ವಿಷಯದಲ್ಲಿ ಮಾಧ್ಯಮಗಳಿಗಿರುವ  ಜವಾಬ್ದಾರಿ ರಾಜಕಾರಣಿಗಳಿಗಿಲ್ಲ.  ರಾಜಕಾರಣಿಗಳು ಮಾಧ್ಯಮಗಳಿಂದ ಸಲಹೆ ಪಡೆದು ರೈತಪರ ಕೆಲಸ ಮಾಡಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next