Advertisement

ಮೈತ್ರಿ ಸರ್ಕಾರ ಸುಭದ್ರ: ಶಾಸಕ ಜೆ.ಎನ್‌.ಗಣೇಶ್‌

11:16 PM May 07, 2019 | Lakshmi GovindaRaj |

ಕಂಪ್ಲಿ: “ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವ ಜೆಡಿಎಸ್‌ ಮತ್ತು ಕಾಂಗ್ರೆಸ್‌ ನೇತೃತ್ವದ ಮೈತ್ರಿ ಸರ್ಕಾರ ಅತ್ಯಂತ ಸುಭದ್ರವಾಗಿದ್ದು, 5 ವರ್ಷ ಪೂರೈಸುತ್ತದೆ. ಇದರಲ್ಲಿ ಯಾವುದೇ ಸಂಶಯವಿಲ್ಲ’ ಎಂದು ಶಾಸಕ ಜೆ.ಎನ್‌.ಗಣೇಶ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, “ರಾಜ್ಯದಲ್ಲಿ ಮೈತ್ರಿ ಸರ್ಕಾರ ಬೀಳಿಸುವ ಕಾರ್ಯವನ್ನು ಯಾವ ಪಕ್ಷಗಳೂ ಮಾಡುತ್ತಿಲ್ಲ. ಬದಲಾಗಿ ಮಾಧ್ಯಮಗಳೇ ಈ ಕಾರ್ಯ ಮಾಡುತ್ತಿವೆ’ ಎಂದು ಆರೋಪಿಸಿದರು. ಮೈತ್ರಿ ಸರ್ಕಾರಕ್ಕೆ ಧಕ್ಕೆ ತರುವಂತಹ ವಿಷಯಗಳನ್ನು ಮಾಧ್ಯಮಗಳು ಬಿತ್ತರಿಸುತ್ತಿವೆ. ಆದರೆ ಮೈತ್ರಿ ಸರ್ಕಾರ ಸಂಪೂರ್ಣ ಸುಭದ್ರವಾಗಿದೆ ಎಂದರು.

ತಾವು ಕಾಂಗ್ರೆಸ್‌ನಲ್ಲೇ ಇದ್ದು, ಪಕ್ಷಾಂತರ ಮಾಡುವ ಯೋಚನೆಯೇ ಇಲ್ಲ. ಕಳೆದ ಹಲವು ದಿನಗಳಿಂದ ಕ್ಷೇತ್ರದಿಂದ ದೂರವಿದ್ದುದರಿಂದ ತುಂಬಾ ನೋವಾಗಿದೆ. ಆದರೆ ಇನ್ನು ಮುಂದೆ ಕ್ಷೇತ್ರದಲ್ಲಿಯೇ ಇದ್ದು ಕಂಪ್ಲಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next