Advertisement

ನರೇಗಾ ಕೋಟ್ಯಂತರ ರೂ ಭ್ರಷ್ಟಾಚಾರ ಆರೋಪ : ಅರಕೆರೆ ಗ್ರಾಮಸ್ಥರ ಪ್ರತಿಭಟನೆ

07:37 PM Jan 14, 2022 | Team Udayavani |

ಕುಣಿಗಲ್ : ತಾಲೂಕಿನ ಕಸಬಾ ಹೋಬಳಿ ಟಿ.ಹೊಸಹಳ್ಳಿ ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಸದಸ್ಯರೊಂದಿಗೆ ಶಾಮೀಲಾಗಿ ನರೇಗಾ ಯೋಜನೆಯನ್ನು ದುರ್ಬಳಕ್ಕೆ ಮಾಡಿಕೊಂಡು ಕೋಟ್ಯಾಂತರೂ ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಶುಕ್ರವಾರ ಅರಕೆರೆ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು.

Advertisement

ತಾಲೂಕಿನ ಅರಕೆರೆ ಗ್ರಾಮದಲ್ಲಿ ಮಹಾತ್ಮಗಾಂಧಿ ರಾಷ್ಟಿçÃಯ ಗ್ರಾಮೀನ ಉದ್ಯೋಗ ಖಾತ್ರಿ ಯೋಜನೆಯನ್ನು ದುರುಪಯೋಗ ಪಡಿಸಿಕೊಂಡು, ಹಣ ಮಾಡುವ ಉದ್ದೇಶದಿಂದ ಗ್ರಾ.ಪಂ ಅಭಿವೃದ್ದಿ ಅಧಿಕಾರಿ ನರಸಿಂಹಮೂರ್ತಿ ಹಾಗೂ ಸದಸ್ಯರು ಹೊಂದಾಗಿ ಗುತ್ತಿಗೆದಾರರ ಮೂಲಕ ಜೆಸಿಬಿ ಯಂತ್ರ ಬಳಸಿ, ಕಾಮಗಾರಿ ಮಾಡಿ, ಗ್ರಾಮಸ್ಥರಿಗೆ ಮಾನವ ದಿನಗಳನ್ನು ನೀಡದೇ ಅನ್ಯಾಯ ಮಾಡಿದ್ದಾರೆ, ಈ ಸಂಬಂಧ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿಸ್ಥರ ವಿರುದ್ದ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಗ್ರಾಮದ ಮುಖಂಡರಾದ ಎ.ಆರ್.ಸುರೇಶ್, ಎ.ಎಂ.ಕೃಷ್ಣಮೂರ್ತಿ, ನೇತೃತ್ವದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಗ್ರಾ.ಪಂ ಆಡಳಿತ ವಿರುದ್ದ ಧಿಕ್ಕಾರ ಕೂಗಿದರು.

ಯೋಜನೆ ಉಲ್ಲಂಘನೆ
ಮುಖಂಡ ಎ.ಆರ್.ಸುರೇಶ್ ಮಾತನಾಡಿ ಗ್ರಾಮೀಣ ಪ್ರದೇಶದ ಜನರಿಗೆ ಉದ್ಯೋಗ ಕಲ್ಪಿಸಿ ಕೊಡುವ ದಿಸೆಯಲ್ಲಿ ಕೇಂದ್ರ ಸರ್ಕಾರ ನರೇಗಾ ಯೋಜನೆಯನ್ನು ಜಾರಿಗೆ ತಂದು, ಜಾಬ್‌ಕಾರ್ಡ್ ನೀಡುವ ಮೂಲಕ ಉದ್ಯೋಗ ಕಲ್ಪಿಸಿಕೊಡುವುದು ಯೋಜನೆ ಉದ್ದೇಶವಾಗಿದೆ ಆದರೆ ಪಿಡಿಓ ನರಸಿಂಹಮೂರ್ತಿ ಗ್ರಾ.ಪಂ ಅಧ್ಯಕ್ಷ ನಾಗಣ್ಣ, ಸದಸ್ಯ ಶ್ರೀನಿವಾಸ್ ಸರ್ಕಾರದ ಯೋಜನೆಯನ್ನು ಗಾಳಿಗೆ ತೂರಿ ಸ್ಥಳೀಯರಿಗೆ ಮಾನವ ದಿನಗಳನ್ನು ನೀಡದೇ, ಗುತ್ತಿಗೆದಾರರ ಮೂಲಕ ಹೊರ ರಾಜ್ಯದ ಜನರಿಂದ ಜೆಸಿಬಿ ಯಂತ್ರ ಬಳಸಿ ಕಾಮಗಾರಿ ಮಾಡಿಸಿದ್ದಾರೆ, ಇದು ಉದ್ಯೋಗ ಖಾತ್ರಿ ಯೋಜನೆಗೆ ವಿರುದ್ದವಾಗಿದೆ ಎಂದು ಆರೋಪಿಸಿದರು.

ಕೋಟ್ಯಾಂತರೂ ಅವ್ಯವಹಾರ
ಜಾಬ್‌ಕಾರ್ಡ್ ಹೊಂದಿರು ಗ್ರಾಮಸ್ಥರು ಉದ್ಯೋಗಕ್ಕಾಗಿ ಗ್ರಾ.ಪಂಗೆ ಅರ್ಜಿ ಸಲ್ಲಿಸಿದರೇ ಉದ್ಯೋಗ ನೀಡುತ್ತಿಲ್ಲ, ಆದರೆ ಹಣ ಮಾಡುವ ಉದ್ದೇಶದಿಂದ ಗ್ರಾ.ಪಂ ಅಧಿಕಾರಿಗಳು ಸ್ಥಳೀಯರೇ ಅಲ್ಲದವರಾದ ಬೆಂಗಳೂರಿನ ವಾಸಿಗಳಿಗೆ, ಅಂಗನವಾಡಿ ಮತ್ತು ಸರ್ಕಾರಿ ನೌಕರರಿಗೆ ಉದ್ಯೋಗ ನೀಡಿ, ಅವರ ಖಾತೆಗೆ ನರೇಗಾ ಯೋಜನೆಯ ಮಾನವ ದಿನಗಳ ಹಣವನ್ನು ಜಮಾ ಮಾಡಿ ಆ ಮೂಲಕ ಕೋಟ್ಯಾಂತರೂ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಸುರೇಶ್ ಆಕ್ರೋಶ ವ್ಯಕ್ತಪಡಿಸಿದರು.

ನರೇಗಾದ ಅವ್ಯವಹಾರ ಅಕ್ರಮದ ಬಗ್ಗೆ ಕುಣಿಗಲ್ ತಾ.ಪಂ ಇಓ ಹಾಗೂ ಜಿ.ಪಂ ಸಿಇಓ ಅವರಿಗೆ ದೂರು ಸಲ್ಲಿಸಿದರು ಯಾವುದೇ ಕ್ರಮಕೈಗೊಂಡಿಲ್ಲ ಇದು ಮತಷ್ಟು ಅವ್ಯವಹಾರ ನಡೆಸಲು ದಾರಿ ಮಾಡಿ ಕೊಟ್ಟಂತ್ತಾಗಿದೆ ಮೇಲ್ನೋಟಕ್ಕೆ ಹಿರಿಯ ಅಧಿಕಾರಿಗಳು ಪಾಲುದಾರರು ಆಗಿರುವ ಶಂಕೆ ವ್ಯಕ್ತವಾಗಿದೆ ಎಂದು ಹೇಳಿದರು.

Advertisement

ಜನರಿಗೆ ಅಶುದ್ದ ನೀರು
ಗ್ರಾಮದಲ್ಲಿ ಕಿರು ನೀರು ಸರಬರಾಜು ಟ್ಯಾಂಕ್ ಸ್ವಚ್ಛಗೊಳಿಸಿ ಎರಡು ಮೂರು ವರ್ಷ ಕಳೆದರೂ ಈವರೆಗೂ ಸ್ವಚ್ಛಗೊಳಿಸಿಲ್ಲ ಜನರು ಅಶುದ್ದವಾದ ನೀರು ಕುಡಿಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ, ಸ್ವಚ್ಛತೆ ಇಲ್ಲದೇ ಊರಿನಲ್ಲಿ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಹೆಚ್ಚಾಗಿದೆ ಈಗಾಗಲೇ ಕೊರೊನಾ ತಾಲೂಕಿನಾಧ್ಯಂತ ವ್ಯಾಪಿಸಿದ್ದು ಜನರು ಭಯದಲ್ಲಿ ಬಧುಕುತ್ತಿದ್ದಾರೆ ಆದರೆ ಗ್ರಾ.ಪಂ ಆಡಳಿತ ಸ್ವಚ್ಛತೆಗೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಸುರೇಶ್ ಗ್ರಾ.ಪಂ ವಿರುದ್ದ ಹರಿದ್ದಾಯಿದರು.

ಪ್ರತಿಭಟನೆ ಎಚ್ಚರಿಕೆ
ಮುಖಂಡ ಎ.ಎಂ.ಕೃಷ್ಣಮೂರ್ತಿ ಮಾತನಾಡಿ ೨೦೧೯-೨೦ ಹಾಗೂ ೨೦೨೧-೨೨ ನೇ ಸಾಲಿನಲ್ಲಿ ನರೇಗಾ ಯೋಜನಡಿಯಲ್ಲಿ ಕೆರೆಮೇಗಲಪಾಳ್ಯ ಪ.ಜಾತಿ ಕಾಲೋನಿಯ ಶಿವಲಿಂಗಯ್ಯ ಅವರ ಮನೆಯಿಂದ ಜಯಮ್ಮ ಅವರ ಮನೆವರೆಗೆ ಹಾಗೂ ಅರಕೆರೆ ಗ್ರಾಮದ ಮುಖ್ಯರಸ್ತೆಯಿಂದ ಕರೀಂಸಾಬ್ ಮನೆಯ ಮಾರ್ಗವಾಗಿ ಕುಂಟಪ್ಪನ ಮನೆವರೆಗೆ ಮತ್ತು ಗ್ರಾಮದ ಸರ್ಕಾರಿ ಶಾಲೆಯ ಹತ್ತಿರ ಬಸಿ ಕಾಲುವೆ ಮತ್ತು ಡಕ್ ನಿರ್ಮಾಣ ಕಾಮಗಾರಿಯನ್ನು ಮಾಡಲಾಗಿದೆ, ಇದೇ ಹಳೇ ಕಾಮಗಾರಿಗೆ ಜ ೧೧ ರಂದು ಎನ್‌ಎಂಆರ್ ತೆಗೆದು ಹೊಸದಾಗಿ ಮನವ ದಿನಗಳ ಕಾಮಗಾರಿ ಮಾಡಲಾಗುತ್ತಿದೆ ಎಂದು ನಿತ್ಯ ಹಾಜರಾತಿ ಪುಸ್ತಕದಲ್ಲಿ ನೊಂದಾಯಿಸಲಾಗುತ್ತಿದೆ, ಇದು ಆಕ್ರಮವಾಗಿದೆ ಎಂದು ಕಿಡಿಕಾರಿದರು, ಕೂಡಲೇ ಸಂಬAಧಪಟ್ಟ ಹಿರಿಯ ಅಧಿಕಾರಿಗಳು ಈ ಸಂಬAಧ ಕ್ರಮಕೈಗೊಳ್ಳಬೇಕು ಇಲ್ಲವಾದಲ್ಲಿ ಗ್ರಾಮಸ್ಥರೊಂದುಗೂಡಿ ಗ್ರಾ.ಪಂ ಕಚೇರಿ ಹಾಗೂ ತಾ.ಪಂ ಕಚೇರಿ ಬಳಿ ಪ್ರತಿಭಟನೆ ನಡೆಸಲಾಗುವುದೆಂದು ಅವರು ಎಚ್ಚರಿಕೆ ನೀಡಿದ್ದಾರೆ.

ಪ್ರತಿಭಟನೆಯಲ್ಲಿ ರಿಯಾಜ್ ಅಹಮದ್, ನಿಸಾರ್ ಅಹಮದ್, ವೆಂಕಟೇಶ್, ತಮ್ಮಣ್ಣ, ಧನಂಜಯ್ಯ, ಯಶೋಧ, ಗಂಗಲಕ್ಷö್ಮಮ್ಮ, ಮಂಜುಳ, ಕೆಂಪಮ್ಮ ಸೇರಿದಂತೆ ಇತರರು ಪಾಲ್ಗೊಂಡಿದರು.

Advertisement

Udayavani is now on Telegram. Click here to join our channel and stay updated with the latest news.

Next