Advertisement

“ಪಕ್ಷ ತೊರೆದವರೆಲ್ಲ ಮತ್ತೆ ಬರುತ್ತಾರೆ’: ಸತೀಶ ಜಾರಕಿಹೊಳಿ

11:06 PM Feb 06, 2022 | Team Udayavani |

ಹುಬ್ಬಳ್ಳಿ: ಕಾಂಗ್ರೆಸ್‌ನಿಂದ ಬಿಜೆಪಿಗೆ ಹೋದವರು ಮತ್ತೆ ಬರುತ್ತಾರೆಂದು ನಾನೊ ಬ್ಬನೇ ಹೇಳಿಲ್ಲ. ನಮ್ಮ ಪಕ್ಷದ ಅಧ್ಯಕ್ಷರಿಂದ ಹಿಡಿದು ಎಲ್ಲರೂ ಅದನ್ನೇ ಹೇಳುತ್ತಿದ್ದಾರೆ.

Advertisement

ಇನ್ನೂ ಪಕ್ಷಾಂತರ ಪರ್ವ ಆರಂಭವಾಗಿಲ್ಲ. ಆದ ಅನಂತರ ಹೋದವರೆಲ್ಲ ಮತ್ತೆ ಬರುತ್ತಾರೆ ಎಂದು ಕೆಪಿಸಿಸಿ ಕಾರ್ಯಾ ಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್‌ ಗಲಾಟೆ ವಿಚಾರ 2-3 ದಿನ ಅಷ್ಟೇ ಇರುತ್ತದೆ. ಅನಂತರ ಅದೆಲ್ಲ ತಣ್ಣಗಾಗುತ್ತೆ. ಇಂತಹ ವಿದ್ಯಮಾನ ಆಗ ಬಾರದು. ಸರಕಾರ ಮತ್ತು ಶಾಲಾ ಆಡಳಿತ ಮಂಡಳಿ ತತ್‌ಕ್ಷಣ ಮಧ್ಯಪ್ರವೇಶಿಸಿ ನಿಗಾ ವಹಿಸಿ ನಿಯಂತ್ರಣ ಮಾಡಬೇಕು.

ಪರಿಸ್ಥಿತಿ ಹೀಗೆ ಮುಂದುವರಿಯದಂತೆ ನೋಡಿಕೊಳ್ಳಬೇಕು. ವಿದ್ಯಾರ್ಥಿ ಗಳು ಕಲಿಯುವ ವಯಸ್ಸಿನಲ್ಲಿ ಮೊದಲು ಸರಿಯಾಗಿ ಕಲಿಯಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next