Advertisement

ಇಸ್ಲಾಂ ಅಪ್ಪಿದ್ದಕ್ಕೆ ಇಷ್ಟೆಲ್ಲ ರಾದ್ಧಾಂತ: ಹಾದಿಯಾ

06:25 AM Mar 11, 2018 | Team Udayavani |

ಕಲ್ಲಿಕೋಟೆ: ಹಾದಿಯಾ ಮದುವೆಯನ್ನು ಯಾರೂ ಪ್ರಶ್ನಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ತೀರ್ಪಿತ್ತ ಬಳಿಕ, ಶನಿವಾರ ಮೊದಲ ಬಾರಿಗೆ ಆಕೆ ತನ್ನ ತವರು ರಾಜ್ಯ ಕೇರಳಕ್ಕೆ ಆಗಮಿಸಿದ್ದಾರೆ. ನಾನು ಇಸ್ಲಾಂಗೆ ಮತಾಂತರ ವಾಗಿದ್ದೇ ಇಷ್ಟೆಲ್ಲಾ ರಾದ್ಧಾಂತಗಳಿಗೆ ಕಾರಣ ಎಂದು ಹಾದಿಯಾ ಹೇಳಿದ್ದಾರೆ. ಸೇಲಂನಿಂದ ಕಲ್ಲಿಕೋಟೆಗೆ ಬಂದ ಹಾದಿಯಾ ಮತ್ತು ಅವರ ಪತಿ ಶಫಿನ್‌ ಜಹಾನ್‌ ಇಲ್ಲಿಯ ಪಾಪ್ಯುಲರ್‌ ಫ್ರಂಟ್‌ ಆಫ್ ಇಂಡಿಯಾದ ಕಚೇರಿಯಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು. ತಮಗೆ ಇಷ್ಟವಿರುವ ಧರ್ಮವನ್ನು ಪಾಲಿಸಲು ಸಂವಿಧಾನ ಬದ್ಧವಾದ ಹಕ್ಕು ಇದೆ ಎಂದು ಹಾದಿಯಾ ಹೇಳಿದರು.
 

Advertisement
Advertisement

Udayavani is now on Telegram. Click here to join our channel and stay updated with the latest news.

Next