Advertisement

ವ್ಯವಸ್ಥಿತ ಚುನಾವಣೆಗೆ ಸಕಲ ಸಿದ್ಧತೆ: ರಾಜು

01:22 PM Apr 14, 2018 | |

ಇಂಡಿ: ಇಂಡಿ ಮತಕ್ಷೇತ್ರದಲಿ 2.28 ಲಕ್ಷ ಮತದಾರರಿದ್ದು ಅದರಲ್ಲಿ 1.18 ಲಕ್ಷ ಪುರುಷ ಹಾಗೂ ಹೆಣ್ಣು 1.10 ಲಕ್ಷ ಮಹಿಳಾ ಮತದಾರಿದ್ದಾರೆ ಎಂದು ವಿಧಾನಸಭೆ ಚುನಾವಣಾಧಿಕಾರಿ, ಕಂದಾಯ ಉಪ ವಿಭಾಗಾಧಿಕಾರಿ ಪಿ.ರಾಜು ಹೇಳಿದರು.

Advertisement

ಪಟ್ಟಣದ ಮಿನಿ ವಿಧಾನಸೌಧದಲ್ಲಿ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಗೆ ಅಗತ್ಯ ಪೂರ್ವಸಿದ್ಧತೆ ಮಾಡಲಾಗಿದ್ದು ಮತಕ್ಷೇತ್ರದಲ್ಲಿ 273 ಮತಗಟ್ಟೆಗಳಿದ್ದು ಇದಕ್ಕಾಗಿ 22 ಸೆಕ್ಟರ್‌ ಮಾಡಲಾಗಿದೆ. ಪ್ರತಿ ಸೆಕ್ಟರ್‌ನಲ್ಲಿ 10ರಿಂದ 15 ಮತಗಟ್ಟೆಗಳು, ಇದರ ವ್ಯಾಪ್ತಿಯಲ್ಲಿ ಬರಲಿದ್ದು ವಿವಿಧ ಇಲಾಖೆ ಅಧಿಕಾರಿಗಳು ಈ ಕಾರ್ಯ ನಿರ್ವಹಿಸಲಿದ್ದಾರೆ. ಪ್ರತಿಯೊಂದು ಮತಗಟ್ಟೆಗಳಲ್ಲಿ ಕುಡಿಯುವ ನೀರಿನ ಹಾಗೂ ವಿದ್ಯುತ್‌, ಶೌಚಾಲಯ, ಸೈನ್‌ ಬೊರ್ಡ್‌, ಅಂಗವಿಕಲರಿಗೆ ರ್‍ಯಾಂಪ್‌ ಸೇರಿದಂತೆ ಬೇಕಾದ ಎಲ್ಲ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

6 ಕ್ರೈನ್ಸ್‌ ಸ್ವ್ಕಡ್‌ಗಳು ನೇಮಿಸಲಾಗಿದ್ದು ಇದರಲ್ಲಿ ಸಿನಿಯರ್‌ ಮ್ಯಾಜಿಸ್ಟ್ರೇಟ್‌ ಸಹಿತ 3 ಜನ ಸಿಬ್ಬಂದಿಯವರು ಇರಲಿದ್ದಾರೆ. 3 ಶಿಫ್ಟಗಳಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಅಲ್ಲದೆ ಎಸ್‌ ಎಸ್‌ಟಿ ಚೆಕ್‌ ಪೋಸ್ಟ್‌ಗಳನ್ನು ತೆರೆಯಲಾಗಿದೆ. ಇಂಡಿ ರೈಲ್ವೆ ನಿಲ್ದಾಣ ಮತ್ತು ಚಿಕ್ಕಮಣೂರ ಕ್ರಾಸ್‌ ಹತ್ತಿರ ತೆರೆಯಲಾಗಿದ್ದು ಸಂಶಯಾಸ್ಪದವಾಗಿ ತಿರುಗಾಡುವ ವಾಹನಗಳು, ವ್ಯಕ್ತಿಗಳನ್ನು ಪರಿಶೀಲನೆ ಮಾಡಲಿದ್ದಾರೆ ಎಂದರು.

ಏ. 17ರಿಂದ ಬೆಳಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ ನಾಮಪತ್ರ ಸಲ್ಲಿಸಬಹುದು. ನಂತರ ಬಂದ ಯಾವುದೆ ನಾಮಪತ್ರಗಳನ್ನು ಸ್ವೀಕರಿಸವುದಿಲ್ಲ. ನಾಮಪತ್ರ ಸಲ್ಲಿಸುವ ಕೊನೆ ದಿನಾಂಕ ಏಪ್ರಿಲ್‌ 24. ಯಾವುದೇ ಒಬ್ಬ ಅಭ್ಯರ್ಥಿ ನಾಮಪತ್ರ ಸಲ್ಲಿಸಲು ಮೆರವಣಿಗೆ ಸೇರಿದಂತೆ ಚುನಾವಣೆ ಮುಗಿಯುವವರೆಗೆ ಲೆಕ್ಕಪತ್ರಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದು. ಪ್ರತಿಯೊಬ್ಬ ಅಭ್ಯರ್ಥಿ 20 ಸಾವಿರಕ್ಕಿಂತ ಮೇಲ್ಪಟ್ಟು ಖರ್ಚು ಮಾಡಿದರೆ ಚೆಕ್‌, ಡಿಡಿ ಇಲ್ಲವೇ ಆರ್‌ಟಿಜಿಎಸ್‌ ಮೂಲಕ ನೀಡಬೇಕು. ಇದನ್ನು ತಮಗೆ ನಿಗದಿ ಪಡಿಸಿದ ಖರ್ಚು ವೆಚ್ಚದಲ್ಲಿ ಬರಲಿದೆ.

ಚುನಾವಣೆ ಪ್ರಚಾರದ ಸಭೆ, ಸಮಾರಂಭಗಳಿಗೆ ಪರವಾನಿಗೆ ಪಡೆಯಲು ಸುವಿಧಾ ಎಂಬ ಆನ್‌ ಲೈನ್‌ ಖಾತೆ ತೆರೆಯಲಾಗಿದ್ದು, ಇದರ ಮೂಲಕ ಪರವಾನಿಗೆ ಪಡೆಯಬಹುದು. ಇಲ್ಲವೇ ನಮ್ಮ ಕಚೇರಿಯಲ್ಲಿ ಪ್ರತ್ಯೇಕ ಕೌಂಟರ್‌ ಇದ್ದು ಅರ್ಜಿ ಸಲ್ಲಿಸಿ ಪರವಾನಿಗೆ ಪಡೆಯಬಹುದು. ಅರ್ಜಿ ಸಲ್ಲಿಸಿ 24 ಗಂಟೆಯಲ್ಲಿ ಸ್ಥಳಗಳನ್ನು ಯಾರಿಗೆ ನೀಡಬೇಕು ಎನ್ನುವುದು ಪರಿಶೀಲನೆ ಮಾಡಿ ಮೊದಲು ಬಂದವರಿಗೆ ಆದ್ಯತೆ ನೀಡಲಾಗುತ್ತದೆ.

Advertisement

ಯಾವುದೆ ದೂರು ಅಥವಾ ಸಾರ್ವಜನಿಕರಿಗೆ ಬೇಕಾದ ಯಾವುದೆ ಮಾಹಿತಿ ಅಲ್ಲದೆ ಅಹಿತಕರ ಘಟನೆಗೆ ಸಂಬಂಧಿಸಿದಂತಹ ದೂರಿಗಾಗಿ ಇಂಡಿಯ ನಮ್ಮ ಕಚೇರಿಯಲ್ಲಿ ಹಾಗೂ ಜಿಲ್ಲಾ, ರಾಜ್ಯಮಟ್ಟದಲ್ಲಿ ಕೂಡಾ ಆನ್‌ಲೈನ್‌ ಕಂಟ್ರೋಲ್‌ ರೂಮ್‌ ತೆರೆಯಲಾಗಿದೆ. ಚುನಾವಣೆಗೆ ಸಂಬಂಧಿಸಿದ ದೂರು ಅಥವಾ ಸಮಸ್ಯೆಗಳನ್ನು ಇದರ ಮೂಲಕ ಸಲ್ಲಿಸಬಹುದಾಗಿದೆ. 

ಅಭ್ಯರ್ಥಿಗಳು ನಡೆಸುವ ಯಾವುದೆ ಸಭೆ, ಸಮಾರಂಭಗಳ ಮೇಲೆ ನಿಗಾ ಇಡುವ ಸಲುವಾಗಿ ವಿಡಿಯೋ ಚಿತ್ರಿಕರಣ ಮಾಡುವವರನ್ನು ನೇಮಕ ಮಾಡಲಾಗಿದ್ದು, ಇದಕ್ಕಾಗಿ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಇದರಿಂದ ಆಗುವ ಖರ್ಚು ವೆಚ್ಚಗಳ ಬಗ್ಗೆ ಮಾಹಿತಿಯನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳುತ್ತಾರೆ.  ನಾಮ ಪತ್ರ ಸಲ್ಲಿಸಲು ಕೇವಲ 5 ಜನರಿಗೆ ಮಾತ್ರ ಕಚೇರಿಯಲ್ಲಿ ಒಳ ಪ್ರವೇಶವಿದ್ದು ನಾಮಪತ್ರ ಸಲ್ಲಿಸಲು ಆಗಮಿಸಿದಾಗ ಕೇವಲ 3 ವಾಹನಗಳಿಗೆ ಮಾತ್ರ 100 ಮೀ. ಅಂತರದಲ್ಲಿ ನಿಲ್ಲಿಸಲು ಅವಕಾಶವಿರುತ್ತದೆ. ಬೇರೆಯಾವುದೆ ವಾಹನಗಳಿಗೆ ಅವಕಾಶ ಇರುವುದಿಲ್ಲ ಎಂದು ಹೇಳಿದರು. ತಹಶೀಲ್ದಾರ್‌ ಡಿ.ಎಂ. ಪಾಣಿ, ಕಂದಾಯ ನಿರೀಕ್ಷಕ ಬಿ.ಎ. ರಾವೂರ, ಪಿ.ಜೆ. ಕೊಡಹೊನ್ನ, ಸಂತೋಷ ಹೊಟಗಾರ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next