Advertisement

I.N.D.I.A. ಒಕ್ಕೂಟದಿಂದ ಐದು ರ‍್ಯಾಲಿಗೆ ಸಿದ್ಧತೆ? ಇಂದಿನ ಮುಂಬೈ ಸಭೆಯಲ್ಲಿ ತೀರ್ಮಾನ

09:55 PM Sep 11, 2023 | Team Udayavani |

ನವದೆಹಲಿ: ಬಿಜೆಪಿ ನೇತೃತ್ವದ ಎನ್‌ಡಿಎ ವಿರುದ್ಧ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಒಗ್ಗಟ್ಟಾಗಿ ಹೋರಾಡುವ ನಿಟ್ಟಿನಲ್ಲಿ ಐ.ಎನ್‌.ಡಿ.ಐ.ಎ ಐದು ಜಂಟಿ ರ‍್ಯಾಲಿಗಳನ್ನು ನಡೆಸಲು ತೀರ್ಮಾನಿಸಿದೆ.

Advertisement

ಲಕ್ನೋ, ಭೋಪಾಲ್‌ ಮತ್ತು ಜೈಪುರಗಳಲ್ಲೂ ಕಾರ್ಯಕ್ರಮ ನಡೆಸಲು ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಸೆ.12ರಂದು ಪ್ರತಿಪಕ್ಷಗಳ ಒಕ್ಕೂಟದ 21 ಮಂದಿಯ ಚುನಾವಣಾ ಪ್ರಚಾರ ಸಮಿತಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಿದೆ.

ಸೆ.6ರಂದು ಮುಂಬೈನಲ್ಲಿ ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರ ನಿವಾಸದಲ್ಲಿ ನಡೆದಿದ್ದ ಸಭೆಯಲ್ಲಿ ಪಾಟ್ನಾ, ನಾಗ್ಪುರ, ಚೆನ್ನೈ, ಗುವಾಹಟಿ ಮತ್ತು ನವದೆಹಲಿಯಲ್ಲಿ ರ‍್ಯಾಲಿ ನಡೆಸುವ ಬಗ್ಗೆ ತೀರ್ಮಾನಿಸಲಾಗಿತ್ತು. ಬಿಜೆಪಿಯ ಹಿಂದುತ್ವ ರಾಜಕೀಯವನ್ನು ಪ್ರಬಲವಾಗಿ ಎದುರಿಸುವ ನಿಟ್ಟಿನಲ್ಲಿ ಬಿಹಾರದ ಜಾತಿ ಗಣತಿಯೂ ಮುಕ್ತಾಯವಾಗಿರುವ ಈ ಸಮಯದಲ್ಲಿ ಪಾಟ್ನಾದಲ್ಲಿಯೇ ಮೊದಲ ರ‍್ಯಾಲಿ ನಡೆಸಲು ಸಲಹೆ ನೀಡಲಾಗಿದೆ.

ಅದೇನೇ ಇದ್ದರೂ ನವದೆಹಲಿಯಲ್ಲಿ ಅ.2ರಂದು ಒಕ್ಕೂಟ ದಿಕ್ಸೂಚಿ ದಾಖಲೆ (ವಿಷನ್‌ ಡಾಕ್ಯುಮೆಂಟ್‌)ಯನ್ನು ಬಿಡುಗಡೆ ಮಾಡಲು ಈಗಾಗಲೇ ನಿರ್ಧರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next