Advertisement

ಮಾಲೆಗಾಂವ್‌ ಸ್ಫೋಟ ಆರೋಪಿಗಳಿಗೆ ನ್ಯಾಯಾಲಯ ಖಡಕ್‌ ಸೂಚನೆ

01:04 AM May 18, 2019 | Team Udayavani |

ಮುಂಬೈ: 2008ರ ಮಾಲೆಗಾಂವ್‌ ಸ್ಫೋಟ ಪ್ರಕರಣದ ಏಳು ಆರೋಪಿಗಳೂ ವಾರಕ್ಕೊಮ್ಮೆ ವಿಚಾರಣೆಗೆ ಹಾಜರಾಗಬೇಕೆಂದು ಮುಂಬೈನ ಎನ್‌ಐಎ ವಿಶೇಷ ಕೋರ್ಟ್‌ ಶುಕ್ರವಾರ ಆದೇಶಿಸಿದೆ. ಭೋಪಾಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್‌, ಲೆ. ಕರ್ನಲ್ ಪ್ರಸಾದ್‌ ಪುರೋಹಿತ್‌ ಸೇರಿದಂತೆ ಎಲ್ಲ 7 ಆರೋಪಿ ಗಳಿಗೂ ಈ ಖಡಕ್‌ ಸೂಚನೆ ನೀಡಲಾಗಿದೆ. ಪ್ರಕರಣದ ವಿಚಾರಣೆಗೆ ಆರೋಪಿಗಳು ಪದೇ ಪದೆ ಗೈರಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾ. ವಿನೋದ್‌ ಪದಾಲ್ಕರ್‌, ಈ ಆದೇಶ ಹೊರಡಿಸಿದ್ದಾರೆ. ಅಲ್ಲದೆ, ಸಕಾರಣವಿದ್ದರಷ್ಟೇ ವಿಚಾರಣೆ ಯಿಂದ ವಿನಾಯ್ತಿ ನೀಡಲಾಗುತ್ತದೆ ಎಂದೂ ಅವರು ಎಚ್ಚರಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next