Advertisement

ಎಲ್ಲ ಆಶಯ ಈಡೇರಿಕೆ

04:14 PM May 08, 2018 | Team Udayavani |

ದಾವಣಗೆರೆ: ಜನತೆಯ ಆಶಯದಂತೆ ಕಾಂಗ್ರೆಸ್‌ ಸಿದ್ಧಪಡಿಸಿರುವ ಪ್ರಣಾಳಿಕೆಯಲ್ಲಿರುವಂತೆ ಎಲ್ಲಾ ಆಶಯಗಳನ್ನು ಸರ್ಕಾರ ಈಡೇರಿಸಲಿದೆ ಎಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ, ಶಾಸಕ ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ.

Advertisement

ಸೋಮವಾರ ಮಹಾನಗರ ಪಾಲಿಕೆ 4, 12ನೇ ವಾರ್ಡ್‌ನಲ್ಲಿ ಚುನಾವಣಾ ಪ್ರಚಾರ ನಡೆಸಿದ ಅವರು, ಈ ಹಿಂದೆ ಪ್ರಣಾಳಿಕೆಯಲ್ಲಿ ನೀಡಿದ್ದ ಎಲ್ಲಾ ಭರವಸೆಗಳನ್ನು ಈಗಿನ ಸರ್ಕಾರ ಈಡೇರಿಸಿದೆ. ಜನರ ಆಶಯದಂತೆ 2018ರ ಚುನಾವಣಾ ಪ್ರಣಾಳಿಕೆ ತಯಾರಿಸಲಾಗಿದೆ. ಈ ಪ್ರಣಾಳಿಕೆಯ ಎಲ್ಲಾ ಅಂಶಗಳನ್ನು ಈಡೇರಿಸಲಾಗುವುದು ಎಂದರು. 

ಮಹಾನಗರ ಪಾಲಿಕೆ ಸದಸ್ಯರಾದ ಎ.ಬಿ. ರಹೀಂ, ಅಲ್ತಾಫ್‌ ಹುಸೇನ್‌, ದಿನೇಶ್‌ ಕೆ.ಶೆಟ್ಟಿ, ಮಾಜಿ ಸದಸ್ಯ ಎನ್‌.ಕೆ.ಇಸ್ಮಾಯಿಲ್‌, ಕೆಪಿಸಿಸಿ ಕಾರ್ಯದರ್ಶಿ ಡಿ. ಬಸವರಾಜ್‌, ಉದ್ಯಮಿ ರವಿ ಇಳಂಗೋವ್‌, ಡಾ| ದೀಪಕ್‌ ಬೋಂದಾಡೆ, ನಗರಸಭೆ ಮಾಜಿ ಸದಸ್ಯ ಉಸ್ಮಾನ್‌, ತಿಮ್ಮರಾಜು, ಸಿಮೇಎಣ್ಣೆ ಪರಮೇಶ್‌, ರುದ್ರಮ್ಮ, ಅಲ್ಲಾವಲಿ ಘಾಜಿಖಾನ್‌, ಸೈಯದ್‌ ಚಾರ್ಲಿ ಇತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next