Advertisement

ಎಲ್ಲರಿಗೂ ನನ್ನ ಮೇಲೆಯೇ ಕಣ್ಣು: ಎಚ್‌.ಡಿ.ಕುಮಾರಸ್ವಾಮಿ

03:40 PM Aug 10, 2021 | Team Udayavani |

ರಾಮನಗರ: ನಾನು ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ ಎಲ್ಲರಿಗೂ ನನ್ನ ಮೇಲೆಯೇ ಕಣ್ಣು. ಹೀಗೆ ಪ್ರತಿಕ್ರಿಯಿಸಿದ್ದು ಚನ್ನಪಟ್ಟಣ ಶಾಸಕ ಹಾಗೂ ಮಾಜಿ ಸಿಎಂ ಎಚ್‌.ಡಿ.ಕುಮಾರ ಸ್ವಾಮಿ.

Advertisement

ಕಾಂಗ್ರೆಸ್‌ ಶಾಸಕ ಜಮೀರ್‌ ಅಹಮದ್‌ ಅವರ ಮನೆಯ ಮೇಲೆ ಇಡಿ ದಾಳಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ತಮ್ಮ ಹಳೇ ಪಕ್ಷದವರೇ ತಮ್ಮ ಮೇಲೆ ದೂರು ನೀಡಿರಬಹುದು ಎಂದು ಹೇಳಿಕೆ ನೀಡಿದ್ದರು.ಜಮೀರ್‌ ಅವರ ಹೇಳಿಕೆಗೆ ಕುಮಾರಸ್ವಾಮಿ ಹೀಗೆ ಪ್ರತಿಕ್ರಿಯಿಸಿದರು.

ಅದಕ್ಕೆಲ್ಲ ಪ್ರತಿಕ್ರಿಯೆ ನೀಡಲ್ಲ: ಬಿಡದಿಯ ಕೇತಗಾನಹಳ್ಳಿ ತೋಟದ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜಮೀರ್‌ ಅಹಮದ್‌ ಅವರಿಗೆ ತಮ್ಮ ಮೇಲೆ ವಿಶೇಷ ಪ್ರೀತಿ. ಹಳೆಯ ಸ್ನೇಹಿತ. ಹೀಗಾಗಿಯೇ ತಮ್ಮ ವಿರುದ್ಧ ಆರೋಪ ಮಾಡಿದ್ದಾರೆ. ಅದಕ್ಕೆಲ್ಲ ಪ್ರತಿಕ್ರಿಯೆ ನೀಡುವುದಿಲ್ಲ. ಕೇಂದ್ರ ಸರ್ಕಾರವಾಗಲಿ, ಇಡಿ, ಐಟಿ ಇಲಾಖೆಗಳು ತಮ್ಮ ಕೈಯಲ್ಲಿ ಇಲ್ಲ. ಏನೇ ಆದರೂ ಅದಕ್ಕೆಲ್ಲ ತಾವೇ ಕಾರಣ ಎನ್ನುವ ಭಾವನೆ ಬಂದು ಬಿಟ್ಟಿದೆ ಎಂದು ಹೇಳಿದರು.

ಇದನ್ನೂ ಓದಿ:ಇಂದಿರಾ ಕ್ಯಾಂಟೀನ್ ಹೆಸರು ಬದಲಾಯಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿಲ್ಲ: ಅಶೋಕ್

ಚರ್ಚೆ ಮಾಡುವ ಅವಶ್ಯವಿಲ್ಲ: ತಂದೆ ಕಲಿಸಿದ್ದು ಕೃಷಿ ತಾವು ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದರೂ, ಕೈಗಾರಿಕೆಗಳು, ಶಿಕ್ಷಣ ಸಂಸ್ಥೆ
ಗಳನ್ನು ತೆರೆಯಲಿಲ್ಲ. ಕೇತಗಾನಹಳ್ಳಿಯಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವುದಾಗಿ, ಬೇರೆಯವರು ಏನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ತಮಗೆ ಆಸಕ್ತಿ ಇಲ್ಲ. ತಮ್ಮದು ಕೃಷಿ ಮೂಲ ಕುಟುಂಬ, ತಮ್ಮ ತಂದೆಯವರು ತಮಗೆ ಕಲಿಸಿದ್ದು ಕೃಷಿ. ಕೇತ ಗಾನಹಳ್ಳಿಯಲ್ಲಿ ಕೃಷಿ ಚಟುವಟಿಕೆಯಲ್ಲೇ ತೊಡಗಿಸಿಕೊಂಡಿದ್ದೇನೆ, ಸಿನೆಮಾ ಅಥವಾ ಇನ್ನಾವುದು ಅಲ್ಲ. ಜತೆಗೆ ಪಕ್ಷಕ್ಕಾಗಿ ಸಂಘಟನೆಗೆ ಏನು ಮಾಡಬೇಕೊ ಅದನ್ನು ಮಾಡುತ್ತಿರುವುದಾಗಿ, ತೋಟದಲ್ಲಿ ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡುತ್ತಿರುವುದಾಗಿ ತಿಳಿಸಿದರು. ಅವರ (ಜಮೀರ್‌) ಹೇಳಿಕೆಗಳಿಗೆ ಪ್ರತಿಕ್ರಿಯಿಸಿ ಚರ್ಚೆ ಮಾಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು

Advertisement
Advertisement

Udayavani is now on Telegram. Click here to join our channel and stay updated with the latest news.

Next