Advertisement

BJP ನಾಯಕರೆಲ್ಲರೂ ಸತ್ಯ ಹರಿಶ್ಚಂದ್ರರಾ: ಶೆಟ್ಟರ್‌

11:55 PM Aug 15, 2023 | Team Udayavani |

ಹುಬ್ಬಳ್ಳಿ: ರಾಜ್ಯದ ಮಾಜಿ ಸಚಿವರಾದ ಸಿ.ಟಿ. ರವಿ, ಆರ್‌. ಅಶೋಕ್‌ ಸೇರಿದಂತೆ ಬಿಜೆಪಿ ನಾಯಕರೆಲ್ಲರೂ ಸತ್ಯ ಹರಿಶ್ಚಂದ್ರರಾ? ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಕನಿಷ್ಠ ನೈತಿಕತೆಯೂ ಅವರಿಗೆ ಇಲ್ಲವಾಗಿದೆ ಎಂದು ಮಾಜಿ ಸಿಎಂ ಹಾಗೂ ವಿಧಾನ ಪರಿಷತ್‌ ಸದಸ್ಯ ಜಗದೀಶ ಶೆಟ್ಟರ್‌ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರ ಬಹಿರಂಗ ಭ್ರಷ್ಟಾಚಾರದಿಂದ ಜುಗುಪ್ಸೆಗೊಂಡು ಜನರು ಅವರನ್ನು ಅಧಿಕಾರದಿಂದ ಕೆಳಗಿಳಿಸಿದ್ದಾರೆ ಎಂದರು.

Advertisement

ಅಡುಗೆ ಇದ್ದ ಕಡೆ ಜಗದೀಶ ಶೆಟ್ಟರ ಹೋಗುತ್ತಾರೆ ಎಂಬ ಮಾಜಿ ಡಿಸಿಎಂ ಆರ್‌.ಅಶೋಕ ಹೇಳಿಕೆಗೆತಿರುಗೇಟು ನೀಡಿದ ಅವರು, ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಯಾದಾಗ ಸಚಿವ ಸ್ಥಾನ ನಿರಾಕರಿಸಿ ಎರಡು ವರ್ಷ ಯಾವ ಅಧಿಕಾರ ಇಲ್ಲದೆಯೇ ಮುಂದುವರಿದ  ತಮಗೆ ಅಧಿಕಾರ ದಾಹ ಇದ್ದಿದ್ದರೆ ಸಚಿವ ರಾಗಲು ಸಮಸ್ಯೆ ಇರಲಿಲ್ಲ. ಶೆಟ್ಟರ್‌ಗೆ ಏನು ಅನ್ಯಾಯ ಮಾಡಿದರೂ ಮಾತನಾಡದೆ ಮನೆಯಲ್ಲಿಯೇ ಇರುತ್ತಾರೆ ಎಂದುಕೊಂಡಿದ್ದ ಬಿಜೆಪಿ ನಾಯಕರಿಗೆ ನಾನು ಕಾಂಗ್ರೆಸ್‌ ಸೇರಿದ್ದು, ಅದು ವಿಧಾನಸಭೆ ಚುನಾವಣೆಯಲ್ಲಿ ಹಲವು ಕ್ಷೇತ್ರಗಳ ಮೇಲೆ ಪರಿಣಾಮ ಬೀರಿ ಬಿಜೆಪಿಗೆ ಹೀನಾಯ ಸೋಲು ಉಂಟಾಗಿರುವುದನ್ನು ಇಂದಿಗೂ ಸಹಿಸಿಕೊಳ್ಳಲಾಗುತ್ತಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next