Advertisement

‘ಅಫ್ಜಲ್‌ ಗುರುವನ್ನು ಬಲಿಪಶು ಮಾಡಲಾಗಿದೆ’: ಸೋನಿ ರಾಜ್ದಾನ್‌ ಎಡವಟ್ಟು

09:28 AM Jan 23, 2020 | Hari Prasad |

ಮುಂಬಯಿ: ಸಂಸತ್‌ ದಾಳಿಯ ಅಪರಾಧಿ ಅಫ್ಜಲ್‌ ಗುರುವನ್ನು ಬಲಿಪಶು ಮಾಡಲಾಗಿದೆ ಎಂದು ಬಾಲಿವುಡ್‌ ನಟಿ ಅಲಿಯಾ ಭಟ್‌ ತಾಯಿ ಸೋನಿ ರಾಜಾªನ್‌ ಟ್ವೀಟ್‌ ಮಾಡಿದ್ದು, ಅದು ವಿವಾದಕ್ಕೆ ಕಾರಣವಾಗುತ್ತಲೇ, ಅದಕ್ಕೆ ಸ್ಪಷ್ಟನೆ ನೀಡಿದ್ದಾರೆ.

Advertisement

ಆರಂಭದಲ್ಲಿ ಬರೆದುಕೊಂಡಿದ್ದ ಅವರು ‘ಇದು ನ್ಯಾಯಾಂಗ ವ್ಯವಸ್ಥೆಯ ನಗೆಪಾಟಲು. ಆತ ಮುಗ್ಧನೇ ಆಗಿದ್ದರೆ ಅಸುನೀಗಿರುವವನನ್ನು ಬದುಕಿಸಲು ಸಾಧ್ಯವೇ? ಹೀಗಾಗಿ ಮರಣ ದಂಡನೆಯನ್ನು ಲಘುವಾಗಿ ಪರಿಗಣಿಸಬಾರದು. ಅಫ್ಜಲ್‌ ಗುರುವನ್ನು ಬಲಿಪಶು ಮಾಡಲಾಗಿತ್ತೋ ಎಂಬ ಬಗ್ಗೆ ತನಿಖೆಯಾಗಬೇಕು’ ಎಂದು ಬರೆದಿದ್ದರು.

ಅದಕ್ಕೆ ವಿರೋಧ ವ್ಯಕ್ತವಾಗುತ್ತಲೇ ‘ಆತ ಮುಗ್ಧ ಎಂದು ಯಾರೂ ಹೇಳುತ್ತಿಲ್ಲ. ಆತ ಡಿಎಸ್‌ಪಿ ದೇವೀಂದರ್‌ ಸಿಂಗ್‌ ಹೆಸರು ಪ್ರಸ್ತಾವಿಸಿದ್ದರೂ ಅವರನ್ನು ಏಕೆ ತನಿಖೆಗೆ ಒಳಪಡಿಸಿಲ್ಲ’ ಎಂದು ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next