Advertisement

ರೇಪ್‌ ಆರೋಪಿ ಯುಪಿ ಸಚಿವನಿಗಾಗಿ ಏರ್‌ಪೋರ್ಟ್‌ಗಳಲ್ಲಿ ಹದ್ದಿನ ಕಣ್ಣು 

10:10 AM Mar 04, 2017 | |

ಹೊಸದಿಲ್ಲಿ: ತನ್ನ ಬೆಂಬಲಿಗರೊಂದಿಗೆ ಕೂಡಿ ಮಹಿಳೆಯೊಬ್ಬಳ ಮೇಲೆ ಗ್ಯಾಂಗ್‌ ರೇಪ್‌ ಮತ್ತು ಆಕೆಯ ಪುತ್ರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸಿ, ತಲೆ ಮರೆಸಿಕೊಂಡಿರುವ ಉತ್ತರಪ್ರದೇಶದ ಸಚಿವ ಗಾಯತ್ರಿ ಪ್ರಜಾಪತಿ ವಿದೇಶಕ್ಕೆ ಪಲಾಯನ ಮಾಡಲು ಸಂಚು ಹೂಡಿದ್ದು , ಈ ಹಿನ್ನಲೆಯಲ್ಲಿ ದೇಶದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಹದ್ದಿನ ಕಣ್ಣು ಇರಿಸಲಾಗಿದೆ.

Advertisement

ವರದಿಯಾದಂತೆ ರೇಪ್‌ ಪ್ರಕರಣದಲ್ಲಿ ಎಫ್ಐಆರ್‌ನಲ್ಲಿ ಮೊದಲ ಆರೋಪಿಯಾಗಿರುವ  49 ರ ಹರೆಯದ ಪ್ರಜಾಪತಿ ವಿದೇಶಕ್ಕೆ ಪಲಾಯನಗೈದು ತಲೆ ಮರೆಸಿಕೊಳ್ಳಲು ಮುಂದಾಗಿದ್ದು, ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು ವ್ಯಾಪಕ ಕಟ್ಟೆಚ್ಚರ ವಹಿಸಿದ್ದಾರೆ. ಉತ್ತರ ಪ್ರದೇಶ -ನೇಪಾಳ ಗಡಿ ಭಾಗದಲ್ಲೂ ಸಶಸ್ತ್ರ ಸೀಮಾ ಬಲ ಹದ್ದಿನ ಕಣ್ಣು ಇರಿಸಿದೆ. 

ಮಹಿಳೆ ತನಗೆ ನ್ಯಾಯ ದೋರಕಿಸಿ ಕೊಡಲು ಸಚಿವನ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ್ದರು. ಆ ಬಳಿಕವೇ ಎಫ್ಐಆರ್‌ ದಾಖಲಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next