Advertisement

ಆಲ್ದೂರು: ಪೊಲೀಸ್‌ ಸಿಬ್ಬಂದಿಗೆ ಗೌರವಾರ್ಪಣೆ

06:17 PM Apr 29, 2020 | Naveen |

ಆಲ್ದೂರು: ಆಲ್ದೂರು ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ಆಲ್ದೂರು ಪಿಎಸ್‌ಐ ಹಾಗೂ ಸಿಬ್ಬಂದಿಗಳನ್ನು ಗೌರವಿಸಲಾಯಿತು. ಮಹಾಮಾರಿ ಕೋವಿಡ್ ತಡೆಗೆ ನಿರಂತರವಾಗಿ ಪೊಲೀಸ್‌
ಇಲಾಖೆಯವರು ಕರ್ತವ್ಯ ನಿರ್ವಹಿಸುತ್ತಿದ್ದು ಅವರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿ ಸೋಮವಾರ ಸಂಜೆ ಪಿಎಸ್‌ಐ ಸುನಿತಾ ಹಾಗೂ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.

Advertisement

ಈ ಸಂದರ್ಭದಲ್ಲಿ ಪಿಎಸ್‌ಐ ಸುನಿತ ಮಾತನಾಡಿ, ದೇಶಕ್ಕಾಗಿ ಸೇವೆ ಮಾಡುತ್ತಿದ್ದೇವೆ. ಪೊಲೀಸ್‌ ಇಲಾಖೆ, ಆರೋಗ್ಯ ಇಲಾಖೆ, ಸೇನೆ, ಸೇರಿದಂತೆ ದೇಶಕ್ಕಾಗಿ ಕೋವಿಡ್ ವಾರಿಯರ್ಸ್‌
ಆಗಿ ಕೆಲಸ ಮಾಡುತ್ತಿದ್ದೇವೆ. ವೈದ್ಯರು ತಮ್ಮ ಪ್ರಾಣ ಪಣಕ್ಕಿಟ್ಟು ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಆದೇಶಿಸಿರುವಂತೆ ಮೇ 3 ರವರೆಗೆ ಲಾಕೌಡೌನ್‌ಗೆ ಕರೆ ನೀಡಿದ್ದು ಜನರು ಸರ್ಕಾರದ ಆದೇಶಗಳನ್ನು ಪಾಲಿಸಿ ಕರೊನಾ ವಾರಿಯರ್ಸ್‌ ಜೊತೆ ಕೈಜೋಡಿಸಿ ಎಂದರು. ಆಲ್ದೂರು ಅತಿ ಸೂಕ್ಷ್ಮ ಪ್ರದೇಶ ಎಂದು ಗುರುತಿಸಿಕೊಂಡಿದ್ದು ಸಧ್ಯ ಅಂತಹ ಯಾವುದೇ ಘಟನೆಗಳು ಜರುಗಿಲ್ಲ. ಎಲ್ಲಾ ಸಮುದಾಯದವರು ಉತ್ತಮ ಸಹಕಾರ ನೀಡುತ್ತಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಪಾದರಾಯಣಪುರದಲ್ಲಿ ಕೋವಿಡ್ ವಾರಿಯರ್ಸ್‌ ಮೇಲೆ ನಡೆದ ಹಲ್ಲೆಯನ್ನು ಅವರು ಖಂಡಿಸಿದರು. ಆಲ್ದೂರು ಬ್ಲಾಕ್‌ ಕಾಂಗ್ರೇಸ್‌ ಸಮಿತಿ ಅಧ್ಯಕ್ಷ ಮೊಹಮದ್‌ ಮುದಾಬೀರ್‌, ಪ್ರಧಾನ ಕಾರ್ಯದರ್ಶಿ ಪೂರ್ಣೇಶ್‌, ಕಿಸಾನ್‌ ಸೆಲ್‌ ಅಧ್ಯಕ್ಷ ಕೃಷ್ಣೇಗೌಡ, ಹೋಬಳಿ ಅಧ್ಯಕ್ಷ ಈರೇಗೌಡ, ಅತಿಫುರ್‌ ರೆಹಮಾನ್‌, ಇದ್ರೀಸ್‌, ಗ್ರಾಪಂ ಸದಸ್ಯ ಅಶ್ರಫ್‌ ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next