Advertisement

ಆಲ್ದೂರು: ಕೋವಿಡ್ ಜಾಗೃತಿ ಜಾಥಾ

12:01 PM Jul 09, 2020 | Naveen |

ಆಲ್ದೂರು: ಪಟ್ಟಣದಲ್ಲಿ ಸುನ್ನಿ ಯುವಜನ ಸಂಘದ ವತಿಯಿಂದ ಕೋವಿಡ್ ವೈರಸ್‌ ಜಾಗೃತಿ ಜಾಥಾ ನಡೆಯಿತು.

Advertisement

ಆಲ್ದೂರಿನ ಅಂಬೇಡ್ಕರ್‌ ವೃತ್ತದಲ್ಲಿ ಕಿಸಾನ್‌ ಸೆಲ್‌ ಜಿಲ್ಲಾಧ್ಯಕ್ಷ ಎಚ್‌.ಎಸ್‌. ಕೃಷ್ಣೇಗೌಡ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ಸರ್ಕಾರ ಎಷ್ಟೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೂ ಸಹ ವೈರಸ್‌ ಅನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗುತ್ತಿಲ್ಲ. ಜನರು ಜಾಗೃತರಾಗಬೇಕು ಎಂದರು.ಆಲ್ದೂರು ಪಿಎಸ್‌ಐ ಶಂಭುಲಿಂಗಯ್ಯ ಬಹದ್ದೂರ್‌ ಮಾತನಾಡಿ, ಕೋವಿಡ್ ವೈರಸ್‌ ಬಗ್ಗೆ ಜನ ಭಯ ಪಡುವ ಅಗತ್ಯವಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಶುಚಿತ್ವಕ್ಕೆ ಆದ್ಯತೆ ಕೊಟ್ಟು,ಜನ ಸಂದಣಿಯಿಂದ ದೂರವಿರಬೇಕು ಎಂದರು.

ಸರ್ಕಾರಿ ಆಸ್ಪತ್ರೆ ವೈದ್ಯ ಡಾ| ಚಾಲುಕ್ಯ ಮಾತನಾಡಿದರು. ಎಚ್‌ಕೆಜೆಎಂ ಜುಮ್ಮಾ ಮಸೀದಿ ಅಧ್ಯಕ್ಷ ಬದ್ರುದೀªನ್‌, ಎಸ್‌ವೈಎಸ್‌ ಅಧ್ಯಕ್ಷ ಇಬ್ರಾಹಿಂ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next