Advertisement

ಮದ್ಯಪ್ರಿಯನಿಂದ ಬಾರ್‌ ಬಾಗಿಲಿಗೆ ಈಡುಗಾಯಿ

05:41 PM May 04, 2020 | Suhan S |

ಬಂಗಾರಪೇಟೆ: ಸೋಮವಾರ ಬಾರ್‌ ಓಪನ್‌ ಆಗುವ ಹಿನ್ನೆಲೆಯಲ್ಲಿ ಮದ್ಯ ಪ್ರಿಯನೋರ್ವ ಬಾರ್‌ ಬಾಗಿಲಿಗೆ ಈಡುಗಾಯಿ ಹೊಡೆದು ಪೂಜೆ ಮಾಡಿದ ಘಟನೆ ತಾಲೂಕಿನ ಬೂದಿಕೋಟೆ ಗ್ರಾಮದಲ್ಲಿ ನಡೆದಿದೆ.

Advertisement

ಬೂದಿಕೋಟೆ ಗ್ರಾಮದಲ್ಲಿ ಮದ್ಯದ ಪ್ರಿಯನೊಬ್ಬ ಬಾರ್‌ ಬಾಗಿಲಿಗೆ ಮಂಗಳಾರತಿ ಮಾಡಿ, ಕಾಯಿ ಹೊಡೆದು ಪೂಜೆ ಮಾಡಿದ್ದಾನೆ. ಬೂದಿಕೋಟೆ ಗ್ರಾಮದಲ್ಲಿನ ಎಂಎಸ್‌ಐಎಲ್‌ ಮದ್ಯದ ಅಂಗಡಿಗೆ ಬೂದಿಕೋಟೆಯ ಸೂರ್ಯ ಪೂಜೆ ಮಾಡಿ ತೊಂದರೆಯಾಗದಂತೆ ಮದ್ಯ ಸಿಗುವಂತೆ ಬೇಡಿಕೊಂಡಿದ್ದಾನೆ. ಮತ್ತೂಂದೆಡೆ ಕೆಜಿಎಫ್ ತಾಲೂಕಿನ ಬೇತಮಂಗಲದಲ್ಲಿ ಬಾರ್ಗೆ ಲೈಟಿಂಗ್‌ ಹಾಕಿಸಿ ಅಲಂಕಾರ ಮಾಡಿ ಬಾರ್‌ ಓಪನ್ ಗೆ  ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಅಬ ಕಾರಿ ಇಲಾಖೆ ಅಧಿಕಾರಿಗಳು ಮದ್ಯದ ಸ್ಟಾಕ್‌ ಸೇರಿದಂತೆ ಬಾರ್‌ಗಳ ಪರಿಶೀಲನೆ ನಡೆಸಿದ್ದಾರೆ.

ಸೋಮವಾರ ಮದ್ಯಕ್ಕೆ ನೂಕು ನುಗ್ಗಲು ಉಂಟಾಗುವ ಸಾಧ್ಯತೆ ಇದೆ. ಬ್ಯಾರಿಕೇಟ್‌ ಮಾದ ರಿಯಲ್ಲಿ ಮರ ಗಳನ್ನು ಬಾರ್‌ ಮುಂದೆ ಅಡ್ಡಲಾಗಿ ಕಟ್ಟ ಲಾಗಿದೆ. ಪಟ್ಟಣದ ಮದ್ಯ ಮಾರಾಟದ ಸಿಎಲ್‌-2 ಬಾರ್‌ಗಳ ಮುಂದೆ ಸಾಮಾಜಿಕ ಅಂತರ ಕಾಪಾಡಿ ಕೊಳ್ಳುವ ಉದ್ದೇಶದಿಂದ 6 ಅಡಿಗಳ ಅಂತರದಲ್ಲಿ ಪೈಂಟ್‌ನಲ್ಲಿ ಬಾಕ್ಸ್‌ ಹಾಕಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next