Advertisement

Albady: ಕುಡಿಯುವ ನೀರಿನ ಪೈಪ್‌ಲೈನ್‌ ಹೊಂಡಕ್ಕೆ ಸಿಲುಕಿದ ಗೂಡ್ಸ್‌ ವಾಹನ

09:08 PM Jun 29, 2024 | Team Udayavani |

ಸಿದ್ದಾಪುರ: ಬೈಂದೂರು ವಿರಾಜಪೇಟೆಯ ರಾಜ್ಯ ಹೆದ್ದಾರಿಯ ಅಲ್ಬಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಳಿ ಶನಿವಾರ ಕುಡಿಯುವ ನೀರಿನ ಪೈಪ್‌ಲೈನ್‌ಗೆ ತೆಗೆದ ಹೊಂಡದಲ್ಲಿ ಸರಕು ತುಂಬಿದ ಲಾರಿಯೊಂದು ಸಿಲುಕಿದೆ.

Advertisement

ರಾಜ್ಯ ಹೆದ್ದಾರಿಯ ಬದಿಯಲ್ಲಿ ಅವೈಜ್ಞಾನಿಕ ಹಾಗೂ ಅಸಮಪರ್ಕವಾಗಿ ಹಾಲಾಡಿಯಿಂದ ಕಾರ್ಕಳಕ್ಕೆ ಕುಡಿಯುವ ನೀರಿನ ಪೊರೈಕೆಯ ಪೈಪ್‌ಲೈನ್‌ ಕಾಮಗಾರಿ ನಡೆಯುತ್ತಿದೆ. ಆಳೆತ್ತರದ ಹೊಂಡ ಮಾಡಿ, ಪೈಪ್‌ಲೈನ್‌ ಮಾಡಲಾಗುತ್ತಿದೆ. ಕುಂಟುತ್ತಾ ಸಾಗುತ್ತಿರುವ ಕಾಮಗಾರಿಯ ಪ್ರದೇಶದಲ್ಲಿ ಯಾವುದೇ ಸೂಚನೆಯ ಫಲಕ ಅಥವಾ ತಡೆಗಳು ಇಲ್ಲದಿರುವುದರಿಂದ ಈಗಾಗಲೇ ಅನೇಕ ಜಾನುವಾರುಗಳು ಮತ್ತು ಜನರು ಪೈಪ್‌ಲೈನ್‌ ಹೊಂಡಕ್ಕೆ ಬಿದ್ದು ಪ್ರಾಣ ತೆತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next