Advertisement

ಆಲಂಕಾರು: ಸ್ವಚ್ಛತೆ, ಮತದಾನ ಜಾಗೃತಿ ಜಾಥಾ

11:33 PM Apr 08, 2019 | Team Udayavani |

ಆಲಂಕಾರು: ಪೆರಾಬೆ ಸ್ಪೋರ್ಟ್ಸ್ ಕ್ಲಬ್‌ ಮತ್ತು 1ನೇ ಅಂಗನವಾಡಿ ಕೇಂದ್ರ ಮನವಳಿಕೆ ಜೇಸಿಐ ಆಲಂಕಾರು ಘಟಕ ಇವುಗಳ ಆಶ್ರಯದಲ್ಲಿ ಸ್ವಚ್ಛತೆ ಹಾಗೂ ಮತದಾನ ಜಾಗೃತಿ ಜಾಥಾ ರವಿವಾರ ನಡೆಯಿತು.

Advertisement

ಆಲಂಕಾರು ಗ್ರಾ.ಪಂ. ಬಳಿಯಿಂದ ಹೊರಟ ಜಾಗೃತಿ ಜಾಥಾ ಪೆರಾಬೆ ಗ್ರಾ.ಪಂ. ಮಾರ್ಗವಾಗಿ ಕುಂತೂರು ತಲುಪಿತು. ಕುಂತೂರು ಗ್ರಾಮಸ್ಥರಲ್ಲಿ ಮತದಾನದ ಜಾಗೃತಿ ಮೂಡಿಸಿ ಬಳಿಕ 1ನೇ ಅಂಗನವಾಡಿ ಕೇಂದ್ರ ಬಳಿ ಮುಕ್ತಾಯಗೊಂಡಿತು. ಮತದಾನದ ಬಗ್ಗೆ ಅರಿವು ಮೂಡಿಸುವ ಮಾಹಿತಿ ಪತ್ರವನ್ನು ಮನೆ ಮನೆಗೆ ಹಂಚಲಾಯಿತು.

ದ.ಕ. ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ, ಒಂಬುಡ್ಸ್‌ಮನ್‌ ನಿರ್ದೇಶಕ ಕೃಷ್ಣ ಮೂಲ್ಯ, ಅಂಗನವಾಡಿ ಶಿಕ್ಷಕಿ ಮೋಹಿನಿ, ಸಹಾಯಕಿ ಯಮುನಾ, ಜೇಸಿಐ ಘಟಕದ ಅಧ್ಯಕ್ಷೆ ಹೇಮಲತಾ ಪ್ರದೀಪ್‌, ಸದಸ್ಯರಾದ ಪ್ರದೀಪ್‌, ಮಹೇಶ್‌, ಪೆರಾಬೆ ನ್ಪೋರ್ಟ್ಸ್ ಕ್ಲಬ್‌ ಅಧ್ಯಕ್ಷ ರೂಪೇಶ್‌ ರೈ ಮರುವಂತಿಲ, ಜತೆ ಕಾರ್ಯದರ್ಶಿ ಅವಿನಾಶ್‌, ಸದಸ್ಯರಾದ ಯೋಗೀಶ್‌, ಅಭಿಷೇಕ್‌, ಹರೀಶ್‌ ಗೌಡ, ಗಂಗಾಧರ ಗೌಡ, ಪುಷ್ಪರಾಜ್‌, ರಾಜೇಶ್‌, ಭುವನೇಂದ್ರ ಸ್ತ್ರೀಶಕ್ತಿ ಸಂಘದ ಸದಸ್ಯರಾದ ಕುಸುಮಾವತಿ, ಅಮಿತಾ, ಕಮಲಾ, ಮೋಹಿನಿ, ದಿವ್ಯಾ, ಚಂದ್ರಾವತಿ, ನಳಿನಿ ಉಪಸ್ಥಿತರಿದ್ದರು. ತಾಸೆ, ಡೋಲು, ಹಾಗೂ ಟ್ರೆಂಪೆಟ್‌ ವಾದನ ಜಾಥಕ್ಕೆ ಮೆರಗು ನೀಡಿತು.

Advertisement

Udayavani is now on Telegram. Click here to join our channel and stay updated with the latest news.

Next