Advertisement

‘ಕಣಮಸ್‌’ದುರಸ್ತಿ ಮಾಡಿ

03:06 PM Aug 18, 2019 | Team Udayavani |

ಆಳಂದ: ತಾಲೂಕಿನ ಕಣಮಸ್‌ ಗ್ರಾಮದ ಸಂಪರ್ಕ ಸೇತುವೆ ಕುಸಿದು ಸಂಚಾರಕ್ಕೆ ಅಡ್ಡಿಯಾಗಿದ್ದು, ಕೂಡಲೇ ದುರಸ್ತಿ ಕೈಗೊಳ್ಳಬೇಕು ಎಂದು ಆಗ್ರಹಿಸಿ ಶುಕ್ರವಾರ ತಹಶೀಲ್ದಾರ್‌ ಕಚೇರಿ ಎದುರು ಗ್ರಾಮಸ್ಥರು ಹಾಗೂ ರೈತ ಸಂಘಟನೆಗಳ ಮುಖಂಡರು ತಹಶೀಲ್ದಾರ್‌ ಕಚೇರಿ ಎಂದು ಪ್ರತಿಭಟನೆ ನಡೆಸಿದರು.

Advertisement

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಉಪಾಧ್ಯಕ್ಷ ಗ್ರಾಮದ ನಾಗೀಂದ್ರಪ್ಪ ಥಂಬೆ ಮಾತನಾಡಿ, ಸೇತುವೆ ಮಳೆ ನೀರಿಗೆ ಕುಸಿದಿರುವುದರಿಂದ ಗ್ರಾಮದ ಸಂಚಾರಕ್ಕೆ ಅಡ್ಡಿಯಾಗಿ ಜನರು ಹೈರಾಣವಾಗುತ್ತಿದ್ದಾರೆ. ಆದರೂ ತಾಲೂಕು ಆಡಳಿತ ಮತ್ತು ಜನ ಪ್ರತಿನಿಧಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸೇತುವೆ ಕುಸಿದಿರುವದರಿಂದ ಗ್ರಾಮಕ್ಕೆ ಬರುವ ಬಸ್‌ ಸಂಚಾರ ಸ್ಥಗಿತವಾಗಿದೆ. ಹೀಗಾಗಿ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು ಐದು ಕಿ.ಮೀ ನಡೆದುಕೊಂಡು ಹೋಗುವಂತಾಗಿದೆ ಎಂದು ಗೋಳು ತೋಡಿಕೊಂಡರು.

ಸೇತುವೆ ಕುಸಿದಿರುವುದರಿಂದ ವಾಹನಗಳ ಸಂಚಾರ ಸಾಧ್ಯವಿಲ್ಲದಾಗಿದೆ. ಇದೇ ಮಾರ್ಗವಾಗಿ ಭಾಲಖೇಡ, ಕೊತನಹಿಪ್ಪರಗಾ, ನಂದಗೂರ, ಹತ್ತರಗಾ ಗ್ರಾಮದ ಪ್ರಯಾಣಕ್ಕೆ ಅಡ್ಡಿಯಾಗಿದೆ. ಶೀಘ್ರವೇ ದುರಸ್ತಿ ಕಾರ್ಯ ಕೈಗೊಳ್ಳದಿದ್ದರೇ ಆಳಂದ ಹಳೆ ಚೆಕ್‌ಪೋಸ್ಟ್‌ ಹತ್ತಿರ ರಸ್ತೆ ತಡೆ ಚಳವಳಿ ಮಾಡಲಾಗುವುದು ಎಂದು ಹೇಳಿದರು.

ತಹಶೀಲ್ದಾರ್‌ ಬಸವರಾಜ ಎಂ.ಬೆಣ್ಣೆಶಿರೂರ ಮನವಿ ಸ್ವೀಕರಿಸಿ ಸೇತುವೆ ದುರಸ್ತಿ ಮಾಡಿಸುವ ಭರವಸೆ ನೀಡಿದರು.

Advertisement

ಸಂಘದ ತಾಲೂಕು ಅಧ್ಯಕ್ಷ ವಿಜಯಕುಮಾರ ಹತ್ತರಕಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಂಜುಳಾ ಭಜಂತ್ರಿ, ಪುರಸಭೆ ಸದಸ್ಯ ಶಿವಪುತ್ರ ನಡಗೇರಿ, ಸಿದ್ಧು ವೇದಶಟ್ಟಿ, ಪುರಸಭೆ ಸದಸ್ಯ ದೊಂಡಿಬಾ ಸೋಲಂಕರ್‌, ಮಲ್ಲಿಕಾರ್ಜುನ ಬೋಳಣಿ, ಶರಣಯ್ಯ ಸ್ವಾಮಿ, ದಶವಂತ, ನೀಲಮ್ಮ ವಾಲಿಕರ್‌, ಸುಮನಬಾಯಿ ಡಾಕೆ, ಮಹಾನಂದ ನರೋಣಿ, ರಾಜು ಡಾಕೆ, ವಿಶ್ವ ಸ್ವಾಮಿ, ಬಸವರಾಜ ಬಿರಾದಾರ, ಪ್ರವೀಣ ಹೂಗಾರ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next