Advertisement

Aland; 11 ವರ್ಷದ ಬಾಲಕಿಯ ಅತ್ಯಾಚಾರಗೈದು ಬಾವಿಗೆ ಎಸೆದರು

09:53 PM Jul 17, 2023 | Team Udayavani |

ಕಲಬುರಗಿ: ಆಳಂದ ತಾಲೂಕಿನ ಗ್ರಾಮವೊಂದರಲ್ಲಿ 11 ವರ್ಷದ ಬಾಲಕಿ ಮೇಲೆ ಅತ್ಯಾಚಾರಗೈದು ಕೊಲೆಗೈದಿರುವ ಅಮಾನುಷ ಘಟನೆ ನಡೆದಿದೆ.

Advertisement

ಬಾಲಕಿಯನ್ನು ಅತ್ಯಾಚಾರಗೈದು ಬಾವಿಗೆ ಎಸೆಯಲಾಗಿದೆ ಎಂದು ಬಾಲಕಿಯ ಪಾಲಕರು ದೂರು ನೀಡಿದ್ದಾರೆ. ಎರಡು ದಿನಗಳ ಹಿಂದೆ ಮನೆ ಪಕ್ಕದಲ್ಲಿ ಓದಲು ಹೋಗಿದ್ದ ಬಾಲಕಿ ಮನೆಗೆ ಬಾರದಿದ್ದಾಗ ಒಂದು ದಿನದ ನಂತರ ಪೊಲೀಸ್ ಠಾಣೆಗೆ ಹೋಗಿ ಕಾಣೆಯಾಗಿದ್ದಾಳೆಂದು ದೂರು ಸಲ್ಲಿಸಿದ್ದಾರೆ.‌ ಸೋಮವಾರ ಗ್ರಾಮದ ಸೀಮಾಂತರದ ಬಾವಿಯಲ್ಲಿ ಶವ ಪತ್ತೆಯಾಗಿದೆ.

ಈ ಘಟನೆ ತಲ್ಲಣಗೊಳಿಸಿದ್ದು, ವರ್ಷದ ಹಿಂದೆ ಇದೇ ಆಳಂದ ತಾಲೂಕಿನ ಗ್ರಾಮವೊಂದರ ಕಬ್ಬಿನ ಗದ್ದೆಯಲ್ಲಿ ಅತ್ಯಾಚಾರಗೈದು ಕೊಲೆ ಮಾಡಲಾಗಿರುವ ಅಮಾನುಷ ಕೃತ್ಯ ಮಾಸುವ ಮುನ್ನವೇ ಈ ಘಟನೆ ನಡೆದಿರುವುದು ಮಾನವಂತ ಸಮಾಜ ತಲೆ ತಗ್ಗಿ ಸುವಂತಾಗಿದೆ.
ಅತ್ಯಾಚಾರ ಹಾಗೂ ಕೊಲೆ‌ ಎಂದು ದೂರು ಸ್ವೀಕರಿಸಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ನಿರೀಕ್ಷಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.‌ಅತ್ಯಾಚಾರ ಹಾಗೂ ಕೊಲೆಗೈದ ಆರೋಪಗಳನ್ನು ಈ ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಕುಟುಂಬಸ್ಥರೊಡನೆ ಗ್ರಾಮಸ್ಥರು, ಸಮಾಜದ ಮುಖಂಡರು, ರಾಜಕೀಯ ನಾಯಕರು ಜಿಲ್ಲಾಧಿಕಾರಿ ಕಚೇರಿ ಎದರುಗಡೆ ಸೋಮವಾರ ಸಂಜೆ ಪ್ರತಿಭಟನೆ ನಡೆಸಿದರು.ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ ಪ್ರತಿಭಟನಾಕಾರರ ಬಳಿ ಬಂದು ಮನವಿ ಸ್ವೀಕರಿಸಿ ಆರೋಪಿಗಳನ್ನು ತಕ್ಷಣವೇ ಬಂಧಿಸುವುದಾಗಿ ತಿಳಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಭಗವಂತರಾಯಗೌಡ ಪಾಟೀಲ್, ಗುರುನಾಥ ಪೂಜಾರಿ, ಹರ್ಷಾನಂದ ಗುತ್ತೇದಾರ, ರವಿ ಪೂಜಾರಿ, ಭೀಮಾಶಂಕರ ಮಾಡ್ಯಾಳ, ಪರಮೇಶ್ವರ ಆಲಗೂಡ ಸೇರಿದಂತೆ ಮುಂತಾದವರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next