Advertisement

ಅಕ್ಷಯ ತೃತೀಯಾ: ಕಲ್ಯಾಣ್‌ ಜುವೆಲರ್ಸ್‍ಸ್‍ನಿಂದ ವಿಶೇಷ ಕೊಡುಗೆಗಳು

11:02 PM May 05, 2019 | Lakshmi GovindaRaj |

ಬೆಂಗಳೂರು: ದೇಶದ ಅತಿ ದೊಡ್ಡ ಚಿನ್ನಾಭರಣಗಳ ತಯಾರಿಕೆ ಮತ್ತು ಮಾರಾಟ ಮಳಿಗೆಯಾಗಿರುವ “ಕಲ್ಯಾಣ್‌ ಜುವೆಲರ್ಸ್‍’ ಅಕ್ಷಯ ತೃತೀಯಾ ಹಬ್ಬದ ಹಿನ್ನೆಲೆಯಲ್ಲಿ ತನ್ನ ಗ್ರಾಹಕರಿಗೆ ವಿವಿಧ ಕೊಡುಗೆಗಳನ್ನು ಘೋಷಿಸಿದೆ. ಚಿನ್ನಾಭರಣಗಳ ತಯಾರಿಕಾ ವೆಚ್ಚದಲ್ಲಿ ರಿಯಾಯಿತಿ, ಮುಂಗಡ ಬುಕ್ಕಿಂಗ್‌ ವ್ಯವಸ್ಥೆ ಮತ್ತು ಉಚಿತ ಚಿನ್ನದ ನಾಣ್ಯಗಳ ಕೊಡುಗೆಗಳು ಕಲ್ಯಾಣ್‌ ಜುವೆಲರ್ಸ್‍ನ ಪ್ರತಿಯೊಂದು ಮಳಿಗೆಗಳಲ್ಲೂ ಗ್ರಾಹಕರಿಗೆ ಲಭ್ಯವಿರಲಿವೆ.

Advertisement

ಅಕ್ಷಯ ತೃತೀಯಾದ ಹಿನ್ನೆಲೆಯಲ್ಲಿ ಕಲ್ಯಾಣ್‌ ಜುವೆಲರ್ಸ್‍ ಗ್ರಾಹಕರಿಗೆ ಖರೀದಿಸುವ ಚಿನ್ನಾಭರಣಗಳ ತಯಾರಿಕಾ ವೆಚ್ಚದ ಮೇಲೆ ಶೇ.3ರಿಂದ ಮೇಲ್ಪಟ್ಟು ವಿಶೇಷ ವಿನಾಯಿತಿ ಲಭಿಸಲಿದೆ. ಅಲ್ಲದೆ, ಅಕ್ಷಯ ತೃತೀಯಾ ದಿನದಂದು ಚಿನ್ನಾಭರಣಗಳ ಖರೀದಿಗೆ ಈಗಾಗಲೇ ಮುಂಗಡ ಬುಕ್ಕಿಂಗ್‌ ಸೌಲಭ್ಯವನ್ನು ಆರಂಭಿಸಿದೆ.

50,000 ರೂ.ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ವಜ್ರಾಭರಣಗಳ ಖರೀದಿಗೆ ಒಂದು ಗ್ರಾಮ್‌ನ ಚಿನ್ನದ ನಾಣ್ಯವನ್ನು ಉಚಿತವಾಗಿ ನೀಡಲಾಗುವುದು. ಇನ್ನು 25,000 ರೂ.ಮೇಲಿನ ಖರೀದಿಗೆ 400 ಮಿ.ಗ್ರಾಮ್‌ನ ಚಿನ್ನದ ನಾಣ್ಯ ಹಾಗೂ 50,000 ರೂ.ಗಳಿಗಿಂತ ಹೆಚ್ಚಿನ ಮೌಲ್ಯದ ಅಮೂಲ್ಯವಾದ ಹರಳು ಮತ್ತು ಸಾಂಪ್ರದಾಯಿಕ ಆಭರಣಗಳ ಖರೀದಿದಾರರಿಗೆ 500 ಮಿ.ಗ್ರಾಮ್‌ನ ಚಿನ್ನದ ನಾಣ್ಯವನ್ನು ನೀಡಲಾಗುವುದು.

“ಕಲ್ಯಾಣ್‌ ಜುವೆಲರ್ಸ್‍’ ಇಂಡಿಯಾ ಲಿಮಿಟೆಡ್‌ ವತಿಯಿಂದ ನಡೆಸಲ್ಪಡುತ್ತಿರುವ, ಸರಕಾರದ ಮಾನ್ಯತೆ ಹೊಂದಿರುವ ಚಿನ್ನಾಭರಣಗಳ ಖರೀದಿಗೆ ಮುಂಗಡ ಸ್ಕೀಮ್‌ನ ಚಂದಾದಾರರಾಗಲು ಅಕ್ಷಯ ತೃತೀಯಾ ದಿನದಂದು ವಿಶೇಷ ಅವಕಾಶವನ್ನು ಕಲ್ಪಿಸಿಕೊಡಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next