Advertisement

Bollywood:‌ ಮತ್ತೆ ಪಾನ್‌ ಮಸಾಲ ಜಾಹೀರಾತಿನಲ್ಲಿ ಶಾರುಖ್‌,ಅಜಯ್,ಅಕ್ಷಯ್; ಗರಂ ಆದ ಫ್ಯಾನ್ಸ್

01:45 PM Oct 09, 2023 | Team Udayavani |

ಮುಂಬಯಿ: ಕಲಾವಿದರು ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವುದು ಹೊಸದಲ್ಲ. ಆದರೆ ಕೆಲವೊಮ್ಮೆ ಈ ಜಾಹೀರಾತಿನಿಂದಲೇ ಕಲಾವಿದರಿಗೆ ವಿರೋಧ ವ್ಯಕ್ತವಾಗುದುಂಟು.ಇದೀಗ ಮತ್ತೆ ಖ್ಯಾತ ಬಾಲಿವುಡ್‌ ಸ್ಟಾರ್‌ ಗಳು ಪಾನ್ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು ಫ್ಯಾನ್ಸ್‌ ಗಳ ಕೆಂಗಣ್ಣಿಗೆ ಕಾರಣವಾಗಿದೆ.

Advertisement

ಅಕ್ಷಯ್ ಕುಮಾರ್ ಶಾರುಖ್ ಖಾನ್ ಮತ್ತು ಅಜಯ್ ದೇವಗನ್ ಪಾನ್ ಮಸಾಲ ಜಾಹೀರಾತಿನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಭಾನುವಾರ (ಅಕ್ಟೋಬರ್‌ 8 ರಂದು) ಅಭಿಮಾನಿಯೊಬ್ಬರು ಸೋಶಿಯಲ್‌ ಮೀಡಿಯಾ ಖಾತೆಯಲ್ಲಿ ಪಾನ್ ಮಸಾಲದ ಹೊಸ ಜಾಹೀರಾತಿನ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಜಾಹೀರಾತಿನಲ್ಲಿ ಏನಿದೆ?:

ಶಾರುಖ್‌, ಅಜಯ್‌ ಕಾರಿನಲ್ಲಿ ಕೂತಿದ್ದಾರೆ. ಅಕ್ಷಯ್‌ ಕುಮಾರ್ ಹಾಡು ಕೇಳುತ್ತಾ ಮನೆಯಲ್ಲಿ ಕೂತಿದ್ದಾರೆ. ಕಾರಿನ ಹಾರ್ನ್‌ ಹೊಡೆದರೂ ಅಕ್ಷಯ್‌ ಹೊರ ಬರದೇ ಇದ್ದಾಗ, ಶಾರುಖ್‌ ಬಾಲ್‌ ವೊಂದನ್ನು ಅಕ್ಷಯ್‌ ನಿವಾಸದ ಕಿಟಕಿಗೆ ಎಸೆಯುತ್ತಾರೆ. ಆದರೆ ಈ ಚೆಂಡು ಅಕ್ಷಯ್‌ ನಿವಾಸದ ಬದಲು ಬೇರೆಯವರ ಮನೆಗೆ( ನಟಿ-ರೂಪದರ್ಶಿ ಸೌಂದರ್ಯ ಶರ್ಮಾ) ಅವರ ಮನೆಗೆ ಹೋಗಿ ಬೀಳುತ್ತದೆ. ಆಗ ಅಜಯ್‌ ಪಾನ್ ಮಸಾಲ ತೆಗೆದು ಸೇವಿಸುತ್ತಾರೆ. ಈ ವೇಳೆ ಅದರ ಪರಿಮಳ ಸೆಳೆದು ಅಕ್ಷಯ್‌ ಬರುವುದನ್ನು ಜಾಹೀರಾತಿನಲ್ಲಿ ತೋರಿಸಲಾಗಿದೆ.

ಇದನ್ನೂ ಓದಿ: Bigg Boss: ಮಾನಸಿಕ ಒತ್ತಡ, ಅನಾರೋಗ್ಯದಿಂದ ಬಿಗ್‌ ಬಾಸ್‌ ಮನೆಯಿಂದ ಹೊರ ನಡೆದ ಸ್ಪರ್ಧಿ

Advertisement

ಅಭಿಮಾನಿಗಳ ಆಕ್ರೋಶ:  ಸದ್ಯ ಈ ಪಾನ್‌ ಮಸಾಲ ಜಾಹೀರಾತಿಗೆ ಫ್ಯಾನ್ಸ್‌ ಗಳು ಕಿಡಿಕಾಡಿದ್ದಾರೆ. “ಇವರು ಪ್ಯಾನ್‌ ಇಂಡಿಯಾ ಸ್ಟಾರ್‌ ಗಳಲ್ಲ, ಪಾನ್‌ ಇಂಡಿಯಾ ಸ್ಟಾರ್‌ ಗಳು” ಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ. “ಹಣಕ್ಕಾಗಿ ಅಕ್ಷಯ್‌ ಏನಾದರೂ ಮಾಡುತ್ತಾರೆ” ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ. “ಹಣ ಮಾಡುವ ಚಟದಿಂದಲೇ ಅಕ್ಷಯ್‌ ಸಿನಿಮಾಗಳು ಸೋಲುತ್ತಿವೆ” ಎಂದು ಇನ್ನೊಬ್ಬರು ಕಮೆಂಟ್‌ ಮಾಡಿದ್ದಾರೆ.

ಮಾತು ಮುರಿದ ಅಕ್ಷಯ್..‌

ಅಕ್ಷಯ್ ಕುಮಾರ್ 2022 ರಲ್ಲಿ ಇನ್ಮುಂದೆ ಪಾನ್‌ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲ್ಲ ಎಂದು ಅಭಿಮಾನಿಗಳ ಬಳಿ ಹೇಳಿದ್ದರು. ಈ ಕಾರಣದಿಂದ ಅವರು ಪಾನ್‌ ಮಸಲಾ ಬ್ರ್ಯಾಂಡ್‌ ವೊಂದರ ಅಂಬಾಸಿಡರ್ ಸ್ಥಾನದಿಂದ ಕೆಳಗಿಳಿದಿದ್ದರು. ತಂಬಾಕು ಬ್ರ್ಯಾಂಡ್‌ ನಲ್ಲಿ ಕಾಣಿಸಿಕೊಂಡದ್ದಕ್ಕಾಗಿ ಅಭಿಮಾನಿಗಳ ಬಳಿ ಕ್ಷಮೆ ಕೇಳಿದ್ದರು. ಆದರೆ ಇದೀಗ ಅವರು ಮಾತು ಮುರಿದ್ದಕ್ಕಾಗಿ ಅಭಿಮಾನಿಗಳು ಗರಂ ಆಗಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next