Advertisement

ಭಾರತ್‌ ಕೆ ವೀರ್‌ ಮೂಲಕ 8 ಕೋಟಿ ರೂ. ಸಂಗ್ರಹ

03:15 AM Jun 30, 2017 | Team Udayavani |

ಹೊಸದಿಲ್ಲಿ: ನಕ್ಸಲರ ಜೊತೆ ಹೋರಾಡುತ್ತಾ ಪ್ರಾಣ ತೆತ್ತ ಅರೆಸೇನಾ ಪಡೆ ಸಿಬ್ಬಂದಿಯ ಕುಟುಂಬಗಳಿಗೆ ಪರಿಹಾರವಾಗಿ ನೀಡಲು ದೇಶಾದ್ಯಂತ ಒಟ್ಟು 8 ಕೋಟಿ ರೂ. ಸಂಗ್ರಹವಾಗಿದ್ದು, ಅದನ್ನು ಗುರುವಾರ ಕೇಂದ್ರ ಗೃಹ ಸಚಿವಾಲಯದ ದತ್ತಿ ನಿಧಿಗೆ ಹಸ್ತಾಂತರಿಸಲಾಗಿದೆ. ‘ಭಾರತ್‌ ಕೆ ವೀರ್‌’ ಎಂಬ ಆ್ಯಪ್‌ ಮತ್ತು ವೆಬ್‌ಸೈಟ್‌ಗೆ ನಾಗರಿಕರು ಮತ್ತು ಸಂಸ್ಥೆಗಳು ನೀಡಿರುವ ದೇಣಿಗೆ ಇದು. ಈ ಆ್ಯಪ್‌ ಯೋಜನೆಯನ್ನು ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಆರಂಭಿಸಿದ್ದು, ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರು ಏಪ್ರಿಲ್‌ನಲ್ಲಿ ಇದಕ್ಕೆ ಚಾಲನೆ ನೀಡಿದ್ದರು. ತದನಂತರ ದೇಶಾದ್ಯಂತದಿಂದ ಹಣ ಹರಿದುಬಂದಿದ್ದು, ಈವರೆಗೆ 7,93,90,858 ರೂ. ಸಂಗ್ರಹವಾಗಿದೆ.

Advertisement

ಶುಕ್ರವಾರ ವಿಡಿಯೋ ಸಂದೇಶ ನೀಡಿರುವ ರಾಜನಾಥ್‌, ಇನ್ನೂ ಹೆಚ್ಚಿನ ಸಹಾಯ ನೀಡುವಂತೆ ಕೇಳಿಕೊಂಡಿದ್ದಾರೆ. ‘ನೀವು ನೀಡುವ ಹಣದಿಂದ ಯೋಧರ ಕುಟುಂಬದವರಿಗೆ ಮಾತ್ರ ಅನುಕೂಲವಾಗುವುದಿಲ್ಲ. ಬದಲಿಗೆ ನಾವು ನಿಮ್ಮೊಂದಿಗಿದ್ದೇವೆ ಎಂಬ ಸಂದೇಶವನ್ನು ಯೋಧರಿಗೆ ನೀಡಿದಂತಾಗುತ್ತದೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next