Advertisement

Lucknow: ಅಕ್ಷಯ್,ಟೈಗರ್ ಶ್ರಾಫ್ ಸಿನಿಮಾ ಪ್ರಚಾರ ವೇಳೆ ಜನರಿಂದ ಚಪ್ಪಲಿ ಎಸೆತ, ಕಲ್ಲು ತೂರಾಟ

11:52 AM Feb 27, 2024 | Team Udayavani |

ಲಕ್ನೋ: ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ಅವರ ಬಹು ನಿರೀಕ್ಷಿತ ‘ಬಡೆ ಮಿಯಾನ್ ಚೋಟೆ ಮಿಯಾನ್’ ಸಿನಿಮಾದ ಪ್ರಚಾರದ ವೇಳೆ ನೂಕು ನುಗ್ಗಲು ಉಂಟಾಗಿ, ಪೊಲೀಸರು ಲಾಠಿ ಚಾರ್ಜ್‌ ನಡೆಸಿರುವ ಘಟನೆ ಲಕ್ನೋದಲ್ಲಿ ನಡೆದಿದೆ.

Advertisement

ಸೋಮವಾರ(ಫೆ.26 ರಂದು) ‘ಬಡೆ ಮಿಯಾನ್ ಚೋಟೆ ಮಿಯಾನ್’ ಸಿನಿಮಾದ ಪ್ರಚಾರ ಕಾರ್ಯಕ್ರಮವನ್ನು ಲಕ್ನೋದಲ್ಲಿ ಏರ್ಪಡಿಸಲಾಗಿತ್ತು.

ಲಕ್ನೋದ ಕ್ಲಾಕ್ ಟವರ್ ಬಳಿ ನೂರಾರು ಜನ ನೆರವೇರಿದ್ದರು. ಈ ನಡುವೆ ಅಕ್ಷಯ್‌ ಹಾಗೂ ಟೈಗರ್‌ ಶ್ರಾಫ್‌ ಅವರು ಸ್ಟಂಟ್‌ ಮಾಡುವ ಮೂಲಕ ನರೆದಿದ್ದ ಜನರನ್ನು ರಂಜಿಸಿದ್ದಾರೆ. ಜನರು ಅಕ್ಷಯ್‌ ಹಾಗೂ ಟೈಗರ್‌ ಶ್ರಾಫ್‌ ಅವರನ್ನು ನೋಡಲು ಹಾತೊರೆದಿದ್ದು, ಈ ವೇಳೆ ನೂಕು ನುಗ್ಗಲು ಉಂಟಾಗಿದೆ.

ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಜನ ಪರಸ್ಪರ ಚಪ್ಪಲಿ ಹಾಗೂ ಕಲ್ಲುಗಳನ್ನು ಎಸೆದುಕೊಂಡಿದ್ದಾರೆ. ಭದ್ರತೆಗಿದ್ದ ಪೊಲೀಸರು ಜನರ ನೂಕು ನುಗ್ಗಲನ್ನು ನಿಯಂತ್ರಿಸುವ ಸಲುವಾಗಿ ಲಘು ಲಾಠಿ ಚಾರ್ಜ್‌ ಮಾಡಿದ್ದಾರೆ.

ಈ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Advertisement

ಅಕ್ಷಯ್ ಮತ್ತು ಟೈಗರ್ ಜೊತೆಗೆ, ‘ಬಡೆ ಮಿಯಾನ್ ಚೋಟೆ ಮಿಯಾನ್’ ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್ ,ಸೋನಾಕ್ಷಿ ಸಿನ್ಹಾ, ಮಾನುಷಿ ಮುಂತಾದವರು ನಟಿಸಿದ್ದಾರೆ. ಈ ಸಿನಿಮಾವನ್ನು ಅಲಿ ಅಬ್ಬಾಸ್ ಜಾಫರ್ ನಿರ್ದೇಶನ ಮಾಡಿದ್ದಾರೆ. ಇದೇ ವರ್ಷದ ಈದ್‌ ಹಬ್ಬದಂದು ಸಿನಿಮಾ ತೆರೆ ಕಾಣಲಿದೆ.

 

 

Advertisement

Udayavani is now on Telegram. Click here to join our channel and stay updated with the latest news.

Next