Advertisement

ಪ್ರಧಾನ ಮಂತ್ರಿ ಪರಿಹಾರ ನಿಧಿಗೆ 25 ಕೋಟಿ ದೇಣಿಗೆ ನೀಡಿ ಮಾದರಿಯಾದ ಅಕ್ಷಯ್ ಕುಮಾರ್ !

01:00 PM Mar 29, 2020 | Mithun PG |

ಮುಂಬೈ: ಜಗತ್ತಿನೆಲ್ಲಡೆ ಹರಡುತ್ತಿರುವ ಮಹಾಮಾರಿ ಕೊರೋನಾ ವೈರಸ್ ವಿರುದ್ಧ ಭಾರತವೂ ಹೋರಾಟ ನಡೆಸುತ್ತಿದೆ.  ವೈರಸ್​ ವಿರುದ್ಧದ ಹೋರಾಟಕ್ಕೆ ಸಾಮಾನ್ಯ ಜನರು, ಉದ್ಯಮಿಗಳು ಸೇರಿದಂತೆ ಸೆಲೆಬ್ರಿಟಿಗಳೂ ಕೈ ಜೋಡಿಸಿದ್ದಾರೆ. ಸಿನಿ ತಾರೆಯರು ಆಯಾ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಪರಿಹಾರ ನಿಧಿ ಸೇರಿದಂತೆ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ತಮ್ಮ ಕೈಲಾದಷ್ಟು ಹಣ ಸಹಾಯ ಮಾಡುತ್ತಿದ್ದಾರೆ.

Advertisement

ನಿನ್ನೆಯಷ್ಟೆ ಪ್ರಭಾಸ್​ 3 ಕೋಟಿ, ಮೊನ್ನೆ ಪವನ್ ಕಲ್ಯಾಣ್​ ಒಂದು ಕೋಟಿ ಹೀಗೆ ಹಲವಾರು ಮಂದಿ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ಸ್ವಲ್ಪ ಸಮಯದ ಹಿಂದೆಯಷ್ಟೆ ಉದ್ಯಮಿ ರತನ್​ ಟಾಟಾ ಅವರೂ ಟಾಟಾ ಟ್ರಸ್ಟ್ ವತಿಯಿಂದ 500 ಕೋಟಿ ನೀಡುತ್ತಿರುವುದಾಗಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದಾರೆ. ಈಗ ನಟ ಅಕ್ಷಯ್​ ಕುಮಾರ್​ ಸಹ 25 ಕೋಟಿ ಹಣವನ್ನು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ನೀಡುವುದಾಗಿ ಟ್ವೀಟ್​ ಮಾಡಿದ್ದಾರೆ.

ಇಲ್ಲಿಯವರೆಗೆ ಇಷ್ಟು ದೊಡ್ಡ ಮೊತ್ತದ ಹಣ ನೀಡಿದ ಏಕೈಕ ನಟ ಎಂದರೆ ಅದು ಅಕ್ಷಯ್​ ಕುಮಾರ್​. ಆ್ಯಕ್ಷನ್​ ಕಿಂಗ್​ ದೇಶದಲ್ಲಿ ಯಾವಾಗ ಇಂತಹ ಪರಿಸ್ಥಿತಿ ಎದುರಾದರೂ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಾರೆ. ಅಕ್ಷಯ್​ ಕುಮಾರ್​ ಅವರ ಟ್ವೀಟ್ ನೋಡಿರುವ ಪ್ರಧಾನಿ ಅದಕ್ಕೆ ಪ್ರತಿಕ್ರಿಯಿಸಿದ್ದಾರೆ.

ಅಕ್ಷಯ್​ ಅವರ ನಿರ್ಧಾರದಿಂದ ಖುಷಿಯಾಗಿರುವ ಟ್ವಿಂಕಲ್​ ಖನ್ನಾ ಸಹ ಹೆಮ್ಮೆಯಿಂದ ಟ್ವೀಟ್​ ಮಾಡಿದ್ದಾರೆ.

ಕೊರೋನಾ ವಿರುದ್ಧದ ಹೋರಾಟಕ್ಕೆ ಹೃತಿಕ್​ ರೋಷನ್​ 20 ಲಕ್ಷ, ಕಪಿಲ್​ ಶರ್ಮಾ 50 ಲಕ್ಷ ನೀಡಿದ್ದಾರೆ. ಹೀಗೆ ಟಾಲಿವುಡ್​, ಸ್ಯಾಂಡಲ್​ವುಡ್​ ಕಲಾವಿದರೂ ಸಹ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next