Advertisement

ಗಡಿಭಾಗದ ಮಕ್ಕಳಿಗಾಗಿ ಶಾಲೆ ನಿರ್ಮಾಣ ಮಾಡಲು ಒಂದು ಕೋಟಿ ಧನ ಸಹಾಯ ಮಾಡಿದ ಅಕ್ಷಯ್ ಕುಮಾರ್

02:28 PM Jun 18, 2021 | Team Udayavani |

ನವದೆಹಲಿ : ಹೊಸ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿ ಇರುವ ಬಾಲಿವುಡ್ ನಟ ಅಕ್ಷಯ್ ಕುಮಾರ್ ಹಾಗಿಂದಾಗ್ಗೆ ಒಂದಿಲ್ಲೊಂದು ವಿಚಾರವಾಗಿ ಸುದ್ದಿಯಲ್ಲಿ ಇದ್ದೇ ಇರ್ತಾರೆ. ಇನ್ನು ಸಾರ್ವಜನಿಕ ಸೇವೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಕಿಲಾಡಿ,  ಇದೀಗ ಜಮ್ಮು ಮತ್ತು ಕಾಶ್ಮೀರದ ಗಡಿಭಾಗದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕೊಡುಗೆಯೊಂದನ್ನು ನೀಡಿದ್ದಾರೆ.

Advertisement

ಹೌದು ಜಮ್ಮು ಕಾಶ್ಮೀರದ ಬಂಡಿಪೋರ ಜಿಲ್ಲೆಯ ಲೈನ್ ಆಫ್ ಕಂಟ್ರೋಲ್​(LoC) ಭಾಗದಲ್ಲಿರುವ ತುಳಾಯಿ ಗ್ರಾಮದಲ್ಲಿ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಶಾಲೆ ನಿರ್ಮಿಸಲು  ಅಕ್ಷಯ್ ಕುಮಾರ್ ಬರೋಬ್ಬರಿ ₹1 ಕೋಟಿ ಹಣವನ್ನು ನೀಡಿದ್ದಾರೆ.

ಸದ್ಯ ಅಕ್ಷಯ್ ಕುಮಾರ್ ತಮ್ಮ ಮುಂಬರುವ ರಾಮ್ ಸೇತು ಸಿನಿಮಾದ ಶೂಟಿಂಗ್ ನಲ್ಲಿ ಇದ್ದಾರೆ.  ನಿನ್ನೆ ಗಡಿಯಲ್ಲಿನ ಸೈನಿಕರ ಜೊತೆ ಸಮಯ ಕಳೆದಿದ್ದ ಅಕ್ಷಯ್ ಕುಮಾರ್ ಯೋಧರ ಜೊತೆ ಸಕತ್ತಾಗಿಯೇ ಸ್ಟೆಪ್ ಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next