Advertisement

ರಾಹುಲ್‌ಗೆ ಕೈಕೊಟ್ಟ ಅಖೀಲೇಶ್‌ ಯಾದವ್‌

07:00 AM Jan 10, 2018 | Team Udayavani |

ಲಕ್ನೋ: ಇತ್ತೀಚೆಗಷ್ಟೇ ಕಾಂಗ್ರೆಸ್‌ ಅಧ್ಯಕ್ಷ ಪದವಿ ಗೇರಿರುವ ರಾಹುಲ್‌ ಗಾಂಧಿಗೆ, 2019ರ ಲೋಕಸಭೆ ಚುನಾವಣೆಗೂ ಮುನ್ನವೇ ವಿಘ್ನ ಎದುರಾಗಿದೆ.

Advertisement

ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಮುಖಂಡ ಅಖೀಲೇಶ್‌ ಯಾದವ್‌ ಅವರು ರಾಹುಲ್‌ ಸಖ್ಯ ತೊರೆಯಲು ನಿರ್ಧರಿಸಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಸೇರಿದಂತೆ ಯಾವ ಪಕ್ಷದ ಜತೆಗೂ ಮೈತ್ರಿ ಮಾಡಿ ಕೊಳ್ಳುವುದಿಲ್ಲ ಎಂದು ಅಖೀಲೇಶ್‌ ಹೇಳಿದ್ದಾರೆ. ಕಾಂಗ್ರೆಸ್‌ ಜತೆಗಿನ ಮೈತ್ರಿಯಿಂದ ನಾವು ಏನನ್ನೂ ಗಳಿಸಿಲ್ಲ. ಹೀಗಾಗಿ ಸದ್ಯಕ್ಕೆ ಪಕ್ಷ ಬಲವರ್ಧನೆಯತ್ತ ನಮ್ಮ ಗಮನ ಇರಲಿದೆ. ಮೈತ್ರಿ ಬಗ್ಗೆ ಮಾತುಕತೆ ನಡೆಸುವುದು ಹಾಗೂ ಸೀಟು ಹಂಚಿಕೆ ಬಗ್ಗೆ ಚರ್ಚೆ ನಡೆಸುವುದೆಲ್ಲವೂ ಸಮಯ ವ್ಯರ್ಥ ಎಂದಿದ್ದಾರೆ.

ಉತ್ತರಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧಿಸಿದ್ದ ಸಮಾಜವಾದಿ ಮತ್ತು ಕಾಂಗ್ರೆಸ್‌ ಪಕ್ಷ ಬಿಜೆಪಿ ಎದುರು ಹೀನಾಯವಾಗಿ ಸೋಲುಂಡಿತ್ತು. ಎಸ್‌ಪಿ 47 ಸ್ಥಾನಗಳನ್ನು ಗಳಿಸಿದರೆ, ಕಾಂಗ್ರೆಸ್‌ 7 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next