Advertisement

ಅಜಿತ್‌ಗೆ ವಿತ್ತ, ಆದಿತ್ಯಗೆ ಪರಿಸರ ಖಾತೆ?

10:00 AM Jan 04, 2020 | Team Udayavani |

ಮುಂಬಯಿ: ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ, ನೂತನ ಸಚಿವರಿಗೆ ಖಾತೆಗಳ ಹಂಚಿಕೆ ಅಂತಿಮಗೊಳಿ ಸಿದ್ದು, ಶುಕ್ರವಾರವೇ ಘೋಷಣೆ ಹೊರಬೀಳುವ ಸಾಧ್ಯತೆಯಿದೆ.

Advertisement

ಉಪಮುಖ್ಯಮಂತ್ರಿ ಹಾಗೂ ಎನ್‌ಸಿಪಿ ನಾಯಕ ಅಜಿತ್‌ ಪವಾರ್‌ ಅವರಿಗೆ ಹಣ ಕಾಸು ಖಾತೆ ಹಾಗೂ ಶಿವಸೇನೆಯ ಆದಿತ್ಯ ಠಾಕ್ರೆ ಅವರಿಗೆ ಪರಿಸರ ಮತ್ತು ಪ್ರವಾಸೋ ದ್ಯಮ ಇಲಾಖೆಯ ಹೊಣೆ ವಹಿಸಲಾಗಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಮಾಜಿ ಸಿಎಂ, ಕಾಂಗ್ರೆಸ್‌ ನಾಯಕ ಅಶೋಕ್‌ ಚವಾಣ್‌ಗೆ ಲೋಕೋಪಯೋಗಿ, ಎನ್‌ಸಿಪಿಯ ಅನಿಲ್‌ ದೇಶ್‌ಮುಖ್‌ಗೆ ಗೃಹ, ಜಯಂತ್‌ ಪಾಟೀಲ್‌ಗೆ ನೀರಾವರಿ, ದಿಲೀಪ್‌ ವಲ್ಸೆ ಪಾಟೀಲ್‌ಗೆ ಕಾರ್ಮಿಕ ಮತ್ತು ಅಬಕಾರಿ, ಚವಾಣ್‌ ಭುಜ್‌ಬಲ್‌ಗೆ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ನೀಡಲಾಗಿದೆ.

ಖಾತೆಗಳ ಹಂಚಿಕೆ ಕುರಿತು ಮೈತ್ರಿ ಪಕ್ಷಗಳಲ್ಲಿ ಯಾರಿಗೂ ಅಸಮಾಧಾನ ಆಗಿಲ್ಲ. ಸದ್ಯದಲ್ಲೇ ಮುಖ್ಯ ಮಂತ್ರಿಗಳು ಖಾತೆಗಳ ಕುರಿತು ಅಧಿಕೃತ ಘೋಷಣೆ ಮಾಡಲಿದ್ದಾರೆ ಎಂದು ಎನ್‌ಸಿಪಿ ವರಿಷ್ಠ ಶರದ್‌ ಪವಾರ್‌ ಹೇಳಿದ್ದಾರೆ. ಇದಕ್ಕೂ ಮುನ್ನ, ಖಾತೆ ಹಂಚಿಕೆ ವಿಚಾರದಲ್ಲಿ ಮೈತ್ರಿ ಪಕ್ಷಗಳ ನಾಯಕರ ನಡುವೆಯೇ ಒಡಕು ಮೂಡಿದೆ ಎಂದು ಶಿವಸೇನೆಯೇ ಹೇಳಿತ್ತು.

Advertisement

Udayavani is now on Telegram. Click here to join our channel and stay updated with the latest news.

Next