Advertisement

Politics: ಅಜಿತ್‌ ಪವಾರ್‌ ಬಣವೇ ನಿಜವಾದ NCP: ಮಹಾರಾಷ್ಟ್ರ ಸ್ಪೀಕರ್‌ ತೀರ್ಪು

09:13 PM Feb 15, 2024 | Team Udayavani |

ಮುಂಬೈ: ಚುನಾವಣಾ ಆಯೋಗವು ಅಜಿತ್‌ ಪವಾರ್‌ ಬಣವೇ ನಿಜವಾದ ನ್ಯಾಷನಲ್‌ ಕಾಂಗ್ರೆಸ್‌ ಪಾರ್ಟಿ (ಎನ್‌ಸಿಪಿ) ಎಂದು ತೀರ್ಪಿತ್ತು, ಗಡಿಯಾರದ ಗುರುತನ್ನೂ ನೀಡಿದ ಕೆಲವೇ ದಿನಗಳಲ್ಲಿ ಎನ್‌ಸಿಪಿ ಸ್ಥಾಪಕ ಶರದ್‌ ಪವಾರ್‌ ಮತ್ತವರ ಪುತ್ರಿ ಸುಪ್ರಿಯಾ ಸುಳೆಗೆ ಮತ್ತೂಂದು ಹಿನ್ನಡೆಯಾಗಿದೆ. ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್‌ ರಾಹುಲ್‌ ನಾರ್ವೇಕರ್‌ ಕೂಡ ಅಜಿತ್‌ ಬಣವೇ ನಿಜವಾದ ಎನ್‌ಸಿಪಿ ಎಂದು ಗುರುವಾರ ತೀರ್ಪು ನೀಡಿದ್ದಾರೆ.

Advertisement

ಪಕ್ಷದ ಹೆಸರು ಮತ್ತು ಚಿಹ್ನೆಗಾಗಿ ಸಿಎಂ ಶಿಂಧೆ ಮತ್ತು ಉದ್ಧವ್‌ ಠಾಕ್ರೆ ಮಧ್ಯೆ ನಡೆದ ಇದೇ ರೀತಿಯ ಸಮರದ ಕುರಿತೂ ಸ್ಮರಿಸಿಕೊಂಡಿರುವ ಸ್ಪೀಕರ್‌, “ಅಜಿತ್‌ ಪವಾರ್‌ ನೇತೃತ್ವದ ಎನ್‌ಸಿಪಿಯೇ ನಿಜವಾದ ರಾಜಕೀಯ ಪಕ್ಷ. ಅಜಿತ್‌ಗೆ ವಿಧಾನಸಭೆಯ 41 ಶಾಸಕರ ಬೆಂಬಲವಿದೆ ಎಂದಿದ್ದಾರೆ.

ಮಹಾರಾಷ್ಟ್ರ ವಿಧಾನಸಭೆಯಲ್ಲಿ ಒಟ್ಟು 53 ಎನ್‌ಸಿಪಿ ಶಾಸಕರಿದ್ದು, ಅದರಲ್ಲಿ 41 ಶಾಸಕರು ಅಜಿತ್‌ ಬಣಕ್ಕೆ ಬೆಂಬಲ ಸೂಚಿಸಿದ್ದರು. ಇನ್ನು ಅಜಿತ್‌ ಸೋದರ ಮಾವ, ಶರದ್‌ ಬಣಕ್ಕೆ ಕೇವಲ 12 ಶಾಸಕರ ಬೆಂಬಲ ಮಾತ್ರ ಲಭಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next