Advertisement

NCP ಸಭೆಗೆ ಅಜಿತ್‌ ಪವಾರ್‌ ಗೈರು!

10:32 PM Apr 21, 2023 | Team Udayavani |

ಮುಂಬೈ: ಎನ್‌ಸಿಪಿ ನಾಯಕ ಅಜಿತ್‌ ಪವಾರ್‌ 40 ಮಂದಿ ಶಾಸಕರ ಜತೆಗೆ ಬಿಜೆಪಿ ಜತೆಗೆ ಗುರುತಿಸಿಕೊಳ್ಳಲಿದ್ದಾರೆ ಎಂಬ ಊಹಾಪೋಹಗಳಿರುವ ನಡುವೆಯೇ ಮುಂಬೈನಲ್ಲಿ ಶುಕ್ರವಾರ ನಡೆದ ಪಕ್ಷದ ಸಮಾವೇಶಕ್ಕೆ ಗೈರು ಹಾಜರಾಗಿದ್ದಾರೆ. ಅವರು ಪುಣೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಪುಣೆಯಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅಜಿತ್‌ ಪವಾರ್‌ ತಮ್ಮ ಅನುಪಸ್ಥಿತಿ ಬಗ್ಗೆ ಹೆಚ್ಚಿನ ಮಹತ್ವ ನೀಡಬೇಕಾದ ಅಗತ್ಯವಿಲ್ಲ.

Advertisement

ಪೂರ್ವನಿಗದಿತ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದರು. ಆದರೆ, ಇತ್ತೀಚಿನ ದಿನಗಳಲ್ಲಿ ಪಕ್ಷದ ಕಾರ್ಯಚಟುವಟಿಕೆಗಳಲ್ಲಿ ಅಜಿತ್‌ ಅವರ ಅನುಪಸ್ಥಿತಿ ಹೆಚ್ಚಾಗತೊಡಗಿದೆ. ಹೀಗಾಗಿ, ಎನ್‌ಸಿಪಿ ವಿಭಜನೆಗೊಳ್ಳಲಿದೆ ಎನ್ನುವ ಮಾತು ಹೆಚ್ಚಾಗಿದೆ. ಇನ್ನು ಈ ಹಿಂದೆಯೂ ಶರದ್‌ ಪವಾರ್‌ ಹಾಗೂ ಅಜಿತ್‌ ಪವಾರ್‌ ಇಬ್ಬರೂ ಈ ವಿಚಾರಗಳು ವದಂತಿ ಎಂದಿದ್ದರು

Advertisement

Udayavani is now on Telegram. Click here to join our channel and stay updated with the latest news.

Next