Advertisement

Fraud Case ಅಜೆಕಾರು: ಹಣ ಪಾವತಿಸದೆ ವಂಚನೆ

09:53 PM Feb 28, 2024 | Team Udayavani |

ಅಜೆಕಾರು: ಕಡ್ತಲ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಎಳ್ಳಾರೆ ಗ್ರಾಮದ ಡಾ. ರಾಮಕೃಷ್ಣ ಎಂಬವರ 7 ಲಕ್ಷ ರೂ ಮೌಲ್ಯದ 15 ಕ್ವಿಂಟಾಲ್‌ ಅಡಿಕೆಯನ್ನು ಫೆ.3 ರಂದು ಬೆಳ್ತಂಗಡಿಯ ಅಡಿಕೆ ವ್ಯಾಪಾರಿ ಮೊಹಮ್ಮದ್‌ ಶರೀಫ್‌ ಎಂಬಾತ ಖರೀದಿಸಿದ್ದ.

Advertisement

ತಾನು ಖರೀದಿ ಮಾಡಿದ್ದ ಅಡಿಕೆಯ ಮೊತ್ತ 7 ಲಕ್ಷ ಹಣವನ್ನು ಡಾ.ರಾಮಕೃಷ್ಣ ಅವರ ಬ್ಯಾಂಕ್‌ ಖಾತೆಗೆ ಜಮಾ ಮಾಡುವುದಾಗಿ ಹೇಳಿದ್ದ.

ಆದರೆ ಮೊಹಮ್ಮದ್‌ ಶರೀಫ್‌ ಅಡಿಕೆ ಖರೀದಿಸಿದ ಬಳಿಕ ಹಣ ಹಾಕದೇ ವಂಚಿಸಿದ್ದು ಅಡಿಕೆಯ ಹಣವನ್ನು ಪಾವತಿಸುವಂತೆ ಶರೀಫ್‌ ಮೊಬೈಲಿಗೆ ಕರೆ ಮಾಡಿದಾಗ ಆತ ಕರೆ ಸ್ವೀಕರಿಸದೇ ವಂಚಿಸಿದ್ದಾನೆ ಎಂದು ಡಾ| ರಾಮಕೃಷ್ಣ ಅಜೆಕಾರು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಈ ಕುರಿತು ಅಜೆಕಾರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next