Advertisement

ಅಜೆಕಾರು: ಕಾರು -ಬೈಕ್‌ ಢಿಕ್ಕಿ, ಸವಾರ ಸಹಿತ ಮಗು ಗಂಭೀರ

01:30 AM Dec 31, 2022 | Team Udayavani |

ಅಜೆಕಾರು: ಕಾರು ಹಾಗೂ ಬೈಕ್‌ ಮುಖಾಮುಖೀ ಢಿಕ್ಕಿಯಾಗಿ ಬೈಕ್‌ ಸವಾರ ಹಾಗೂ ಮಗು ಗಂಭೀರವಾಗಿ ಗಾಯಗೊಂಡ ಘಟನೆ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಮಂಗಿಲಾರು ಕ್ರಾಸ್‌ ಬಳಿ ಡಿ. 30ರಂದು ಸಂಭವಿಸಿದೆ.

Advertisement

ಅಂಡಾರು ಗ್ರಾಮದ ಕೊಂದಲ್ಕೆ ನಿವಾಸಿ ನಿತ್ಯಾನಂದ ಕುಲಾಲ್‌ (32) ಹಾಗೂ ಅವರ ಸಹೋದರಿಯ ಎಂಟು ವರ್ಷದ ಮಗು ಗಂಭೀರವಾಗಿ ಗಾಯಗೊಂಡಿದ್ದಾರೆ.

ಸವಾರ ನಿತ್ಯಾನಂದ ತನ್ನ ಪತ್ನಿಯನ್ನು ಕಾರ್ಕಳಕ್ಕೆ ಬಿಟ್ಟು ಮತ್ತೆ ಅಂಡಾರು ಕಡೆ ಸಹೋದರಿಯ ಮಗುವನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಕಾರ್ಕಳದಿಂದ ಅಂಡಾರು ಕಡೆಗೆ ಹೋಗುತ್ತಿದ್ದಾಗ ಹೆಬ್ರಿ ಕಡೆಯಿಂದ ಕಾರ್ಕಳ ಕಡೆಗೆ ತೆರಳುತ್ತಿದ್ದ ಬಲೆನೊ ಕಾರು ಢಿಕ್ಕಿ ಹೊಡೆದಿದೆ. ಬೈಕ್‌ ನಜ್ಜುಗುಜ್ಜಾಗಿದೆ.

ನಿತ್ಯಾನಂದ ಕುಲಾಲ್‌ ಅವರ ಸಹೋದರಿಯ ಮಗು ರಿಷಿಕಾ ಅಜ್ಜಿ ಮನೆಗೆಂದು ಡಿ. 29ರಂದು ಬಂದಿದ್ದು, ಈಕೆ ಶಂಕರಪುರ ಆಂಗ್ಲಮಾಧ್ಯಮ ಶಾಲೆಯ 3ನೇ ತರಗತಿ ವಿದ್ಯಾರ್ಥಿನಿ. ಗಂಭೀರ ಗಾಯಗೊಂಡ ಮಗುವಿಗೆ ಮಣಿಪಾಲ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next