Advertisement

“ಕೃಷ್ಣ ಟಾಕೀಸ್‌’ನಲ್ಲಿ ಅಜೇಯ್‌

09:11 AM May 10, 2019 | Lakshmi GovindaRaj |

ಕೆಲವು ನಟರಿಗೆ ಕೆಲವು ಟೈಟಲ್‌ಗ‌ಳು ಅದೃಷ್ಟದ ಸಂಕೇತವಾಗಿರುತ್ತದೆ. ಆ ಟೈಟಲ್‌ನಡಿ ಸಿನಿಮಾ ಮಾಡಿದರೆ ಗೆಲುವು ಪಕ್ಕಾ ಎಂಬ ನಂಬಿಕೆ ಕೂಡಾ ಇರುತ್ತದೆ. ನಟ ಅಜೇಯ್‌ ರಾವ್‌ ಅವರ ವಿಷಯಕ್ಕೆ ಬರೋದಾದರೆ ಅವರಿಗೆ ಕೃಷ್ಣ ಹೆಸರು ಅದೃಷ್ಟ ಎನ್ನಬಹುದು. “ಕೃಷ್ಣನ್‌ ಲವ್‌ಸ್ಟೋರಿ’, “ಕೃಷ್ಣನ್‌ ಮ್ಯಾರೇಜ್‌ ಸ್ಟೋರಿ’, “ಕೃಷ್ಣಲೀಲಾ’ ಹೀಗೆ ಸತತವಾಗಿ ಕೃಷ್ಣ ಸೀರಿಸ್‌ನಡಿ ಸಿನಿಮಾ ಮಾಡಿಕೊಂಡು ಬರುತ್ತಿದ್ದಾರೆ. ಈಗ ಮತ್ತೂಮ್ಮೆ ಕೃಷ್ಣ ಟೈಟಲ್‌ ಅವರಿಗೆ ಒಲಿದು ಬಂದಿದೆ.

Advertisement

ಹೌದು, ಅಜೇಯ್‌ ರಾವ್‌ ಅವರ ಹೊಸ ಸಿನಿಮಾಕ್ಕೆ “ಕೃಷ್ಣ ಟಾಕೀಸ್‌’ ಎಂದು ಹೆಸರಿಡಲಾಗಿದೆ. ಒಂದರ ಹಿಂದೊಂದರಂತೆ ಸಿನಿಮಾ ಮಾಡುತ್ತಿರುವ ಅಜೇಯ್‌ ಅವರ ಯಾವ ಸಿನಿಮಾಕ್ಕೆ “ಕೃಷ್ಣ ಟಾಕೀಸ್‌’ ಎಂದಿಡಲಾಗಿದೆ ಎಂದು ನೀವು ಕೇಳಬಹುದು. ಆನಂದ ಪ್ರಿಯ ನಿರ್ದೇಶನದಲ್ಲಿ ಅಜೇಯ್‌ ರಾವ್‌ ಸಿನಿಮಾ ಮಾಡಲಿದ್ದಾರೆಂಬ ಸುದ್ದಿಯನ್ನು ನೀವು ಈ ಹಿಂದೆ ಇದೇ ಬಾಲ್ಕನಿಯಲ್ಲಿ ಓದಿರುತ್ತೀರಿ.

ಈಗ ಆನಂದ ಪ್ರಿಯ ತಮ್ಮ ಹೆಸರನ್ನು ವಿಜಯಾನಂದ ಎಂದು ಬದಲಿಸಿಕೊಂಡಿದ್ದು, ಆ ಚಿತ್ರಕ್ಕೆ “ಕೃಷ್ಣ ಟಾಕೀಸ್‌’ ಎಂಬ ಟೈಟಲ್‌ ಫಿಕ್ಸ್‌ ಆಗಿದೆ. ಚಿತ್ರಕ್ಕೆ ಇಂದು ಮುಹೂರ್ತ ನಡೆಯಲಿದ್ದು, ಇಂದಿನಿಂದ ಸತತವಾಗಿ ಚಿತ್ರೀಕರಣ ಮಾಡುವ ಉದ್ದೇಶ ಚಿತ್ರತಂಡಕ್ಕಿದೆ. “ಕೃಷ್ಣ ಟಾಕೀಸ್‌’ ಟೈಟಲ್‌ “ಬಾಲ್ಕನಿ ಎಫ್-13′ ಎಂಬ ಟ್ಯಾಗ್‌ಲೈನ್‌ ಕೂಡಾ ಇದೆ.

ಈ ಚಿತ್ರ ಗೋಕುಲ್‌ ಎಂಟರ್‌ಟೈನರ್ ಬ್ಯಾನರ್‌ನಡಿ ಎ.ಎಚ್‌.ಗೋವಿಂದ ರಾಜು ನಿರ್ಮಿಸುತ್ತಿದ್ದಾರೆ. ಅಂದಹಾಗೆ, ಇದೊಂದು ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್‌ ಚಿತ್ರವಾಗಿ ಪ್ರೇಕ್ಷಕರ ಗಮನ ಸೆಳೆಯಲಿದೆ ಎಂಬುದು ಚಿತ್ರತಂಡದ ಮಾತು. ಚಿತ್ರಕ್ಕೆ ಇಬ್ಬರು ನಾಯಕಿಯರು. ಅಪೂರ್ವ ಹಾಗೂ ಸಿಂಧುಲೋಕನಾಥ್‌ ಈ ಚಿತ್ರದ ನಾಯಕಿಯರು.

ಮೆಲೋಡಿ ಹಾಡುಗಳ ಮೂಲಕ ಗಮನಸೆಳೆಯುತ್ತಿರುವ ಸಂಗೀತ ನಿರ್ದೇಶಕ ಶ್ರೀಧರ್‌ ಸಂಭ್ರಮ “ಕೃಷ್ಣ ಟಾಕೀಸ್‌’ ಚಿತ್ರಕ್ಕೂ ಸಂಗೀತ ನೀಡುತ್ತಿದ್ದಾರೆ. ವಿಲಿಯಮ್‌ ಡೇವಿಡ್‌ ಅವರ ಛಾಯಾಗ್ರಹಣ, ಶ್ರೀಕಾಂತ್‌ ಅವರ ಸಂಕಲನ ಚಿತ್ರಕ್ಕಿದೆ. ಚಿತ್ರದಲ್ಲಿ ಚಿಕ್ಕಣ್ಣ, ಪ್ರಕಾಶ್‌ ತುಮ್ಮಿನಾಡು, ಪ್ರಮೋದ್‌ ಶೆಟ್ಟಿ, ಯಶ್‌ ಶೆಟ್ಟಿ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಶಿವಮೊಗ್ಗ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next