Advertisement

ಉಪ್ಪಿನಂಗಡಿಯಲ್ಲಿ ತಂದೆಯ ಅಸ್ಥಿ ವಿಸರ್ಜನೆ ಮಾಡಿದ ಐಶ್ವರ್ಯಾ ರೈ 

02:34 PM Apr 08, 2017 | Team Udayavani |

ಮಂಗಳೂರು: ಬಾಲಿವುಡ್‌ನ‌ ಖ್ಯಾತ ನಟಿ ಐಶ್ವರ್ಯಾ ರೈ  ಅವರು ಪುತ್ರಿ ಮತ್ತು ಕುಟುಂಬ ಸದಸ್ಯರೊಂದಿಗೆ ಶುಕ್ರವಾರ ಮಂಗಳೂರಿಗೆ ಆಗಮಿಸಿದ್ದಾರೆ.  ಇತ್ತೀಚೆಗೆ ಮುಂಬಯಿಯಲ್ಲಿ ನಿಧನಹೊಂದಿದ  ತಂದೆ ಕೃಷ್ಣರಾಜ್‌ ರೈ ಅವರ ಅವರ ಅಸ್ಥಿ ವಿಸರ್ಜನೆಯನ್ನು ಉಪ್ಪಿನಂಗಡಿಯ ನೇತ್ರಾವತಿ-ಕುಮಾರಧಾರಾ ನದಿಗಳ ಸಂಗಮ ಸ್ಥಳದಲ್ಲಿ ನೆರವೇರಿಸಿದರು.  

Advertisement

ಐಶ್ವರ್ಯಾ ದಂಪತಿಯ ಪುತ್ರಿ ಆರಾಧ್ಯ,ತಾಯಿ ವೃಂದಾ ,ಸಹೋದರ ಆದಿತ್ಯ ರೈ  
ಸೇರಿದಂತೆ ಕುಟುಂಬ ಸದಸ್ಯರು ಜೊತೆಗಿದ್ದರು. 

ಮುಂಬಯಿಯಿಂದ ವಿಮಾನದ ಮೂಲಕ ಬೆಳಗ್ಗೆ 10.45ಕ್ಕೆ ಬಜಪೆ ಆಗಮಿಸಿದ ಅಶರು  ಶ್ರೀ ಕ್ಷೇತ್ರ ಕದ್ರಿ ಮತ್ತು ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು.

ಇಂದು ಸಂಜೆ  ಮಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ತಂಗಲಿರುವ ಅವರು, ರವಿವಾರ ನಗರದ ವಿವಿಧ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಂಜೆ ವಿಮಾನದ ಮೂಲಕ ತೆರಳಲಿದ್ದಾರೆ ಎಂದು ತಿಳಿದುಬಂದಿದೆ.

ಮಾಜಿ ವಿಶ್ವಸುಂದರಿಯನ್ನು ನೋಡಲು ನೂರಾರು ಜನ ಕುತೂಹಲಿಗಳಾಗಿ ಕಾಯುತ್ತಿದ್ದುದು ಕಂಡು ಬಂದಿತು. 

Advertisement
Advertisement

Udayavani is now on Telegram. Click here to join our channel and stay updated with the latest news.

Next