Advertisement

ವಿಮಾನ ನಿಲ್ದಾಣ ಸ್ಥಳ ಪರಿಶೀಲನೆ

07:19 AM Jun 20, 2020 | Suhan S |

ಅಂಕೋಲಾ: ಅಲಗೇರಿಯಲ್ಲಿ ನಿರ್ಮಿಸಲಾಗುತ್ತಿರುವ ವಿಮಾನ ನಿಲ್ದಾಣದ ಸ್ಥಳ ಪರಿಶೀಲನೆ ಮತ್ತು ನಿಲ್ದಾಣದ ನೀಲ ನಕ್ಷೆಯನ್ನು ಸಚಿವ ಜಗದೀಶ ಶೆಟ್ಟರ್‌ ಪರಿಶೀಲನೆ ನಡೆಸಿದರು.

Advertisement

ಬಳಿಕ ಬೇಲೇಕೇರಿಯ ಮೀನುಗಾರಿಕೆ ಪ್ರದೇಶ ಮತ್ತು ಪ್ರಸ್ತಾವಿತ ವಾಣಿಜ್ಯ ಬಂದರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿಮಾನ ನಿಲ್ದಾಣ ವೀಕ್ಷಣೆ ಸಂದರ್ಭದಲ್ಲಿ ಸಿಬರ್ಡ್‌ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿ ಡಾ| ಹರೀಶಕುಮಾರ, ನೀಲ ನಕ್ಷೆ ಮತ್ತು ಯೋಜನೆ ರೂಪರೇಶಗಳ ಕುರಿತು ಸಚಿವರಿಗೆ ಮಾಹಿತಿ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಟಾರ ಅಧಿಕಾರಿಗಳಿಂದ ಯೋಜನಾ ಗಾತ್ರ, ಒಳಪಡುವ ಒಟ್ಟೂ ಭೂಮಿ ಮತ್ತಿತರ ಮಾಹಿತಿ ಪಡೆದುಕೊಂಡು ಅಗತ್ಯ ಸೂಚನೆ ನೀಡಿದರು. ಶಾಸಕಿ ರೂಪಾಲಿನಾಯ್ಕ ಅವರು ತನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಸ್ಥಳೀಯ ಜನರಿಗೆ ತೊಂದರೆಯಾಗದಂತೆ ಯೋಜನೆ ರೂಪಿಸಬೇಕೆಂದರು.

ಶಾಸಕ ದಿನಕರ ಶೆಟ್ಟಿ, ಸರ್ಕಾರದ ಪ್ರಧಾನ ಕಾರ್ಯದರ್ಶಿ ಕಪಿಲ್‌ ಮೋಹನ, ಜಿ.ಪಂ. ಸಿಇಒ ರೋಷನ್‌, ಕುಮಟಾ ಉಪವಿಭಾಗಾಧಿಕಾರಿ ಅಜೀತ ರೈ, ತಹಶೀಲ್ದಾರ್‌ ಉದಯ ಕುಂಬಾರ, ಪುರಸಭೆ ಮುಖ್ಯಾಧಿಕಾರಿ ಬಿ. ಪ್ರಲ್ಹಾದ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next