Advertisement

ಆಗಸ್ಟ್‌ 7ರ ವರೆಗೆ ಆರೆಸ್ಟ್‌ ಆಗದಂತೆ ಕಾರ್ತಿಗೆ ಕೋರ್ಟ್‌ ರಕ್ಷಣೆ

12:02 PM Jul 10, 2018 | udayavani editorial |

ಹೊಸದಿಲ್ಲಿ : ಏರ್‌ಸೆಲ್‌ ಮ್ಯಾಕ್ಸಿಸ್‌ ಕೇಸಿನಲ್ಲಿ ದಿಲ್ಲಿ ಕೋರ್ಟ್‌ ಮಾಜಿ ಕೇಂದ್ರ ಹಣಕಾಸು ಸಚಿವ ಪಿ ಚಿದಂಬರಂ ಮತ್ತು  ಅವರ ಪುತ್ರ ಕಾರ್ತಿ ಚಿದಂಬರಂ ಅವರು ಆಗಸ್ಟ್‌ 7ರ ವರೆಗೆ ಅರೆಸ್ಟ್‌ ಆಗದಂತೆ ರಕ್ಷಣೆ ನೀಡಿದೆ. 

Advertisement

ಚಿದಂಬರಂ ಅವರು ಕಳೆದ ಮೇ 30ರಂದು ತನಗೆ ಏರ್‌ಸೆಲ್‌ ಮ್ಯಾಕ್ಸಿಸ್‌ ಕೇಸಿನಲ್ಲಿ ಅರೆಸ್ಟ್‌ ಅಗದಿರುವುದಕ್ಕೆ ರಕ್ಷಣೆ ಕೋರಿ ಅರ್ಜಿ ಸಲ್ಲಿಸಿದ್ದರು. ನನ್ನ ವಿರುದ್ಧದ ಎಲ್ಲ ಸಾಕ್ಷ್ಯಗಳು ಡಾಕ್ಯುಮೆಂಟರಿ ಸ್ವರೂಪದ್ದಾಗಿದ್ದು ಅವೆಲ್ಲವೂ ಹಾಲಿ ಸರಕಾರದ ಕೈಯಲ್ಲಿದೆಯಲ್ಲದೆ ನನ್ನಿಂದ ಏನನ್ನೂ ವಶಪಡಿಸಿಕೊಳ್ಳಲಾಗಿಲ್ಲ ಎಂದು ಚಿದಂಬರಂ ಅರ್ಜಿಯಲ್ಲಿ ನಿವೇದಿಸಿಕೊಂಡಿದ್ದರು. 

2011 ಮತ್ತು 2012ರಲ್ಲಿ  ಅನುಕ್ರಮವಾಗಿ ಸಿಬಿಐ ಮತ್ತು ಇಡಿ ದಾಖಲಿಸಿದ್ದ  ಎರಡು ಕೇಸುಗಳಲ್ಲಿ ನ್ಯಾಯಾಲಯವು ಕಾರ್ತಿ ಗೆ ಇಂದಿನ ವರೆಗೆ ಅರೆಸ್ಟ್‌ ಆಗದಂತೆ ಮಧ್ಯಾವಧಿ ಜಾಮೀನು ಮಂಜೂರು ಮಾಡಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next