Advertisement

ಏರ್‌ ಸ್ಟ್ರೈಕ್‌; ಸಮಯೋಚಿತ ಕಾರ್ಯತಂತ್ರ: ನಿವೃತ್ತ ಏರ್‌ವೈಸ್‌ ಮಾರ್ಷಲ್‌ ಕರಣಿಕ್‌

10:14 PM Apr 02, 2019 | sudhir |

ಕಾರ್ಕಳ: ಭಾರತದೊಂದಿಗೆ ಅಸಹನೆಯಿಂದ ನಡೆದುಕೊಳ್ಳುವ ರಾಷ್ಟ್ರಗಳ ವಿಷಯದಲ್ಲಿ ಸಮಯೋಚಿತ ಕಾರ್ಯತಂತ್ರ ಅನುಸರಿಸಲೇಬೇಕು. ಕಳೆದ ಫೆಬ್ರವರಿಯಲ್ಲಿ ಕಾಶ್ಮೀರದ ಪುಲ್ವಾಮಾ ಎಂಬಲ್ಲಿ ಪಾಕ್‌ ಪ್ರಚೋದಿತ ಉಗ್ರಗಾಮಿಗಳು ನಡೆಸಿದ ಹತ್ಯಾಕಾಂಡಕ್ಕೆ ಪ್ರತಿಯಾಗಿ ಭಾರತದ ವಿಮಾನ ಪಡೆ ಪಾಕಿಸ್ಥಾನದ ಬಾಲಾಕೋಟ್‌ಗೆ ಧೈರ್ಯದಿಂದ ನುಗ್ಗಿ ದಾಳಿ ಮಾಡಿದ್ದು ಸಾಂದರ್ಭಿಕ ದಂಡ ನೀತಿಗೆ ಅನುಗುಣವಾಗಿಯೇ ಇತ್ತೆಂದು ನಿವೃತ್ತ ಏರ್‌ವೈಸ್‌ ಮಾರ್ಷಲ್‌ ಕೆ. ರಮೇಶ್‌ ಕರಣಿಕ್‌ ಹೇಳಿದರು.

Advertisement

ಅವರು ಕಾರ್ಕಳ ಸಾಹಿತ್ಯ ಸಂಘವು ಪ್ರಕಾಶ್‌ ಹೊಟೇಲ್‌ನ ಸಂಭ್ರಮ ಹಾಲ್‌ನಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಪುಲ್ವಾಮಾ ಹತ್ಯಾಕಾಂಡ ಬಾಲಾಕೋಟ್‌ ಪ್ರತೀಕಾರ ಎಂಬ ವಿಷಯದ ಕುರಿತು ಮಾತನಾಡಿದರು. ಭಾರತವು ಎಂದಿಗೂ ಯುದೊœàನ್ಮಾದಿಯಲ್ಲ. ಆದರೆ ಸ್ವರಕ್ಷಣೆಯ ವಿಷಯದಲ್ಲಿ ತಟಸ್ಥನಾಗಿರುವುದು ನಿಷ್ಕ್ರಿಯತೆಯ ಲಕ್ಷಣವೆನಿಸಿಕೊಳ್ಳುತ್ತದೆ ಎಂದು ರಮೇಶ್‌ ಕರಣಿಕ್‌ ಹೇಳಿದರು.

ಸಾಹಿತ್ಯ ಸಂಘದ ಗೌರವಾಧ್ಯಕ್ಷ ಆರ್‌. ತುಕಾರಾಮ ನಾಯಕ್‌ ಅವರು ರಮೇಶ್‌ ಕರಣಿಕ್‌ ಅವರನ್ನು ಗೌರವಿಸಿದರು. ಸಾಹಿತ್ಯ ಸಂಘದ ಕಾರ್ಯಾಧ್ಯಕ್ಷ ಪ್ರೊ| ಎಂ. ರಾಮಚಂದ್ರ ಸ್ವಾಗತಿಸಿ, ಕಾರ್ಯದರ್ಶಿ ರುಕ್ಮಿಣಿ ಭಟ್‌ ಕಾರ್ಯಕ್ರಮ ನಿರ್ವಹಿಸಿದರು. ಸಾಹಿತ್ಯ ಸಂಘದ ಪ್ರಧಾನ ಕಾರ್ಯದರ್ಶಿ ಪ್ರೊ| ಬಿ. ಪದ್ಮನಾಭ ಗೌಡ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next