Advertisement

ಏರೋ ಶೋ: ಮಾಂಸದಂಗಡಿ ಬಂದ್‌

06:39 AM Feb 06, 2019 | Team Udayavani |

ದೇವನಹಳ್ಳಿ: ಯಲಹಂಕದ ಹುಣಸನ ಮಾರನಹಳ್ಳಿ ಸಮೀಪದ ವಾಯು ನೆಲೆ ಯಲ್ಲಿ ಫೆ.20 ರಿಂದ 24 ರವರೆಗೆ ಏರೋ ಶೋ ಕಾರ್ಯಕ್ರಮ ನಡೆಯಲಿದೆ.

Advertisement

ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸುತ್ತ ಮುತ್ತಲಿನ ಪ್ರದೇಶಗಳಲ್ಲಿನ ಮಾಂಸದ ಅಂಗಡಿಗಳನ್ನು ಮುಚ್ಚಲು ಆದೇಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಕರೀಗೌಡ ತಿಳಿಸಿದರು. ತಾಲೂಕಿನ ಚಪ್ಪರ ದಕಲ್ಲು ಸರ್ಕಲ್‌ ಬಳಿಯಿರುವ ಜಿಲ್ಲಾ ಸಂಕೀರ್ಣದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ವಿಮಾನ ನಿಲ್ದಾಣದ ಸರಹದ್ದಿನಲ್ಲಿ ಮತ್ತು ತಾಲೂಕು ವ್ಯಾಪ್ತಿಯಲ್ಲಿ ಇರು ವಂತಹ ಮಾಂಸ ಮಾರಾಟದ ಅಂಗಡಿ ಗಳಿಂದಾಗಿ ಪಕ್ಷಿಗಳು ಮಾಂಸದ ತ್ಯಾಜ್ಯಗಳನ್ನು ಸೇವಿಸುವ ಸಲುವಾಗಿ ಸುತ್ತಮುತ್ತಲೂ ಆಕಾಶದಲ್ಲಿ ಹಾರಾಡು ತ್ತಿರುತ್ತವೆ.

ಈ ರೀತಿ ಪಕ್ಷಿಗಳು ಆಕಾಶದಲ್ಲಿ ಹಾರುವುದರಿಂದ ವಿಮಾನ ಗಳ ಸುಗಮ ಹಾರಾಟಕ್ಕೆ ಅಡಚಣೆ ಯಾಗುವ ಸಂಭವವಿರುತ್ತದೆ. ಆದ್ದರಿಂದ, ಫೆ.20 ರಿಂದ 24 ರವರೆಗೆ ಬೆಂಗಳೂರು ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ನಡೆಸುತ್ತಿ ರುವ ಮಾಂಸದ ಅಂಗಡಿಗಳನ್ನು ಕಡ್ಡಾಯ ವಾಗಿ ಮುಚ್ಚುವಂತೆ ಆದೇಶಿದಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next