Advertisement

ಏರಿಂಡಿಯಾ, ಇಂಡಿಗೋ ಮೇಲೆ ಕೇಸು: ಸಂಸದ ಎಚ್ಚರಿಕೆ

03:45 AM Mar 27, 2017 | Team Udayavani |

ಮುಂಬೈ: ಏರ್‌ ಇಂಡಿಯಾ ಸಿಬ್ಬಂದಿಗೆ ಚಪ್ಪಲಿಯಿಂದ ಹೊಡೆದು, ಸ್ಥಳೀಯ ವಿಮಾನಯಾನ ಸಂಸ್ಥೆಗಳಿಂದ ನಿಷೇಧಕ್ಕೆ ಒಳಗಾಗಿರುವ ಮಹಾರಾಷ್ಟ್ರದ ಶಿವಸೇನೆ ಸಂಸದ ರವೀಂದ್ರ ಗಾಯಕ್ವಾಡ್‌, ಇದೀಗ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ. 

Advertisement

ತಾವು ಮುಂಗಡವಾಗಿ ಕಾಯ್ದಿರಿಸಿದ್ದ ಟಿಕೆಟ್‌ಗಳನ್ನು ಮುನ್ಸೂಚನೆ ಇಲ್ಲದೆ ರದ್ದು ಮಾಡಿದ ಏರ್‌ ಇಂಡಿಯಾ, ಇಂಡಿಗೋ ವಿರುದ್ಧ ಕಾನೂನು ಸಮರ ನಡೆಸುವುದಾಗಿ ಗಾಯಕ್ವಾಡ್‌ ಭಾನುವಾರ ತಿಳಿಸಿದ್ದಾರೆ. ಇನ್ನೊಂದೆಡೆ ಪಕ್ಷದ ಜನಪ್ರತಿನಿಧಿಗಳ ಹಿಂಸಾ ಕೃತ್ಯಗಳನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದ್ದ ಶಿವಸೇನೆ ಕೂಡ ಏರ್‌ ಇಂಡಿಯಾ ವಿರುದ್ಧ ತಿರುಗಿಬಿದ್ದಿದೆ. “”ಸಾರ್ವಜನಿಕರು ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಿದರೆ ಹೇಗಿರುತ್ತದೆಂದು ಏರ್‌ ಇಂಡಿಯಾ ಯೋಚಿಸಬೇಕು,” ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next