Advertisement

ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಅಮಿತಾಭ್‌ ಗುಡುಗು

12:00 AM Oct 20, 2019 | Team Udayavani |

ಮುಂಬಯಿ: “ಯಾವುದೇ ಮನುಷ್ಯನ ಕಾಯಿಲೆಗಳು ಹಾಗೂ ಅವಕ್ಕೆ ಸಂಬಂಧಿಸಿದ ವೈದ್ಯಕೀಯ ದಾಖಲೆಗಳು ಆಯಾ ವ್ಯಕ್ತಿಯ ಖಾಸಗಿತನಕ್ಕೆ ಸಂಬಂಧಿಸಿದ್ದಾಗಿರುತ್ತವೆ. ಅವನ್ನು ಆರ್ಥಿಕ ಉದ್ದೇಶಗಳಿಗಾಗಿ ಬಳಸುವುದು ಸಾಮಾಜಿಕ ಕಾನೂನನ್ನು ಉಲ್ಲಂಘಿಸಿದಂತೆ’ ಎಂದು ಬಾಲಿವುಡ್‌ಹಿರಿಯ ನಟ ಅಮಿತಾಭ್‌ ಬಚ್ಚನ್‌ ತಿಳಿಸಿದ್ದಾರೆ.

Advertisement

ಶನಿವಾರ ಮುಂಜಾನೆ ತಮ್ಮ ಬ್ಲಾಗ್‌ನಲ್ಲಿ ಬಿಗ್‌ ಬಿ ಹೀಗೆ ಬರೆದುಕೊಳ್ಳಲು ಒಂದು ಕಾರಣವಿದೆ. ಪಿತ್ತಜನಕಾಂಗದ ಸಮಸ್ಯೆ ಹೊಂದಿರುವ ಅಮಿತಾಭ್‌ ಬಚ್ಚನ್‌, ಆಗಾಗ ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿಕೊಂಡು ಬರುತ್ತಾರೆ. ಈ ವಾರವೂ ಹೀಗೆಯೇ ಆಸ್ಪತ್ರೆಗೆ ಹೋಗಿದ್ದರು. ಆದರೆ, ಕೆಲವು ಮಾಧ್ಯಮಗಳು ಈ ವಿಚಾರದ ಹಿಂದೆ ಬಿದ್ದಿದ್ದು, ಹಲವಾರು ಊಹಾಪೋಹದ ವರದಿಗಳನ್ನು ನೀಡಿದ್ದವು. ಈ ಹಿನ್ನೆಲೆಯಲ್ಲಿ ಬಿಗ್‌ ಬಿ ಹೀಗೆ ಬರೆದುಕೊಂಡಿದ್ದಾರೆ. ಶುಕ್ರವಾರ ರಾತ್ರಿ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next